ವಾರಣಾಸಿ : ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಹಬ್ಬದ ವಾತಾವರಣ. ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿ ಕಾರಿಡಾರ್ ಉದ್ಘಾಟಿಸಿ, ವಿಶೇಷ ಪೂಜೆ ಸಲ್ಲಿಸಿದರು.
ಇಂದು ವೇದ ಘೋಷಗಳ ನಿನಾದದೊಂದಿಗೆ 45 ನಿಮಿಷಗಳ ಕಾಲ ಗಂಗಾರತಿ ನಡೆದಿದ್ದು, ಕ್ರೂಸ್ನಲ್ಲಿ ನಿಂತು ಪ್ರಧಾನಿ ಮೋದಿ ಅವರು ಪವಿತ್ರ ಗಂಗಾರತಿಯನ್ನ ಕಣ್ತುಂಬಿಕೊಂಡರಯ. ಇನ್ನು ಈ ಗಂಗಾರತಿಯಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಕರ್ನಾಟಕದ ಸಿಎಂ ಬಸವರಾಜ್ ಬೊಮ್ಮಾಯಿ, ಸೇರಿದಂತೆ ಬಿಜೆಪಿ ಸರ್ಕಾರವಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿ ಸಂಭ್ರಮ ಕಣ್ತುಂಬಿಕೊಂಡರು.
ಹಿಂದೂ ಸಂಪ್ರದಾಯದಲ್ಲಿ ಈ ಗಂಗಾರತಿಗೆ ವಿಶೇಷ ಸ್ಥಾನ ನೀಡಲಾಗಿದೆ. ಪಾಪನಾಶಿನಿಯಾಗಿ ಇಲ್ಲಿ ಗಂಗೆ ಹರಿಯುತ್ತಾಳೆ. ಬ್ರಹ್ಮ, ಶಿವ ಗಂಗೆಯನ್ನ ಹೊತ್ತು ತಂದ ಸ್ಥಳವೆಂಬ ಪ್ರತೀತಿ ಇದೆ. ಇನ್ನು ಬ್ರಹ್ಮ 10 ಕುದುರೆಗಳನ್ನ ಬಲಿ ಕೊಟ್ಟ ಸ್ಥಳವೆಂತಲೂ ಐಹಿತ್ಯವಿದ್ದು, ಇದೇ ಸ್ಥಳದಲ್ಲಿ ದಶಾಶ್ವವೇಧ ಯಜ್ಞ ನಡೆದಿತ್ತು. ಇಂದು ಈ ಸ್ಥಳವು ದೀಪಗಳಿಂದ ಕಂಗೊಳಿಸಿತು.