ಕರಾವಳಿ

ಮುನಿಯಾಲು : ಲಯನ್ಸ್ ಪ್ರಾಂತೀಯ ಸಮ್ಮೇಳನ; ಒಳ್ಳೆಯ ಮನಸ್ಸುಗಳಿಂದ ಮಾತ್ರ ಸೇವೆ ಸಾಧ್ಯ: ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು

1

ವರದಿ : ಶ್ರೀದತ್ತ ಹೆಬ್ರಿ

ಮುನಿಯಾಲು : ಒಳ್ಳೆಯ ಮನಸ್ಸು ಗಳು ಸೇರಿದಾಗ ಮಾತ್ರ ಗ್ರಾಮೀಣ ಪ್ರದೇಶದಲ್ಲೂ ಸಮಾಜಸೇವೆ ಮಾಡಬಹುದು ಎಂಬುದಕ್ಕೆ ಮುನಿಯಾಲು ಲಯನ್ಸ್ ಕ್ಲಬ್ ಸಾಕ್ಷಿ. ಕೋವಿಡ್ ಸಂಕಷ್ಟ ದಲ್ಲಿ ಲಯನ್ಸ್ ಕ್ಲಬ್ ಸೇರಿ ಜಿಲ್ಲೆಯ ಸಂಘಸಂಸ್ಥೆಗಳು ಮಾಡಿದ ಜನಸೇವೆ ಶ್ಲಾಘನೀಯ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಳ್ಳಾರೆ ಬಿ.‌ಸದಾಶಿವ ಪ್ರಭು ಹೇಳಿದರು.

ಅವರು ಮುನಿಯಾಲು ಲಯನ್ಸ್ ಕ್ಲಬ್ ಆತಿಥ್ಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸಮುದಾಯದ ಭವನದಲ್ಲಿ ಭಾನುವಾರ ನಡೆದ ” ವೀರಭದ್ರ” ಲಯನ್ಸ್ ಪ್ರಾಂತೀಯ ಸಮ್ಮೇಳನದಲ್ಲಿ ಭಾಗವಹಿಸಿ ಮಾತನಾಡಿದರು.

Advertisement. Scroll to continue reading.

ಸಮ್ಮೇಳನಾಧ್ಯಕ್ಷರಾದ ಮುನಿಯಾಲು ಶಂಕರ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮೂರಿನಲ್ಲಿ ನಡೆದ ಸಮ್ಮೇಳನ ನನ್ನ ಜೀವನದ ಮರೆಯದ ಕ್ಷಣ, ಸಮ್ಮೇಳನದ ಯಶಸ್ವಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ನಿವೃತ್ತ ಯೋಧರಾದ ನಕ್ಸಲ್ ನಿಗ್ರಹ ಪಡೆಯ ಇನ್ ಫೆಕ್ಟರ್ ಎಳ್ಳಾರೆ ಶೇಖರ ಶೇರಿಗಾರ್, ಪ್ರಗತಿಪರ ಕೃಷಿ ಕಾರ್ಮಿಕ ಶಿವರಾಮ ಪ್ರಭು, ಆರೋಗ್ಯ ಸಹಾಯಕಿ ಎಲಿಯಮ್ಮ, ಭೂತನರ್ತಕ ರಾಮ ಪಾಣಾರ, ಎಡಿಸಿ ಸದಾಶಿವ ಪ್ರಭು ಸಹಿತ ವಿವಿಧ ಗಣ್ಯರು ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಸಹಾಯಧನ ವಿತರಣೆ, ಶಾಶ್ವತ ಯೋಜನೆಗಳ ಹಸ್ತಾಂತರ ನಡೆಯಿತು.

ರೆಡ್ ಎಫ್ ಎಂ ಆರ್ ಜೆ ನಯನ ಶೆಟ್ಟಿ, ಲಯನ್ಸ್ ಜಿಲ್ಲೆಯ ಡಾ. ಎಂಕೆ. ಭಟ್, ಸುರೇಶ್ ಶೆಟ್ಟಿ, ಇಂದ್ರಾಳಿ ಜಯಕರ ಶೆಟ್ಟಿ, ಸುರೇಶ್ ಪ್ರಭು, ವಲಯಾಧ್ಯಕ್ಷರಾದ ರೋಹಿತ್ ಕುಮಾರ್ ಶೆಟ್ಟಿ, ಹೃಷಿಕೇಶ್ ಶೆಟ್ಟಿ, ಸುರೇಶ್ ಶೆಟ್ಟಿ, ರೀಜನ್ ಅಡ್ವೆಸರ್ ಉದಯ ಕುಮಾರ್ ಹೆಗ್ಡೆ, ಜಯಪ್ರಕಾಶ ಭಂಡಾರಿ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಸಂಪತ್ ಪೂಜಾರಿ, ಲಿಯೋ ಅಧ್ಯಕ್ಷೆ ಪೂಜಾಶ್ರೀ, ಲಯನ್ಸ್ ವಿವಿಧ ಪ್ರಮುಖರು, ಸಮ್ಮೇಳನ ಸಮಿತಿಯ ಅಧ್ಯಕ್ಷ ಉಮೇಶ ಶೆಟ್ಟಿ, ಕಾರ್ಯದರ್ಶಿ ಗೋಪಿನಾಥ್ ಭಟ್, ಕೋಶಾಧಿಕಾರಿ ಹರ್ಷ ಶೆಟ್ಟಿ, ಮುನಿಯಾಲು ಲಯನ್ಸ್ ಕ್ಲಬ್‌ ಅಶೋಕ ಎಂ ಶೆಟ್ಟಿ, ಕೋಶಾಧಿಕಾರಿ ಖಜಾನೆ ಸಂದೇಶ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಉಮೇಶ್ ಶೆಟ್ಟಿ ಸ್ವಾಗತಿಸಿ‌, ಸಪ್ನಾ ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Advertisement. Scroll to continue reading.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com