ಕರಾವಳಿ

ಬ್ರಹ್ಮಾವರ : ದೇವಸ್ಥಾನ, ದೈವಸ್ಥಾನಗಳು ಅಂತರಂಗ ಶುದ್ಧಿಗೊಳಿಸುವ ಕೇಂದ್ರಗಳು : ಭೀಮೇಶ್ವರ ಜೋಶಿ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ದೇವಸ್ಥಾನಗಳು ದೈವಸ್ಥಾನಗಳು ಅಂತರಂಗವನ್ನು ಶುದ್ಧಿಗೊಳಿಸುವ ಕೇಂದ್ರಗಳು ಎಂದು ಹೊರನಾಡು ಶ್ರೀ ಅನ್ನಪೂಣೆಶ್ವರೀ ದೇವಸ್ಥಾನದ ಧರ್ಮಕರ್ತರಾದ ಭೀಮೇಶ್ವರ ಜೋಶಿ ಹೇಳಿದರು .
ಗುರುವಾರ ಬಾರಕೂರು ಹೋಸಾಳ ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಜರುಗಿದ ಪುನರ್ ಪ್ರತಿಷ್ಠೆ ಮತ್ತು ಸಹಸ್ರ ಕುಂಭಾಭಿಶೇಕದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಧಾರ್ಮಿಕ ಪ್ರವಚನ ನೀಡಿ ಮಾತನಾಡಿ ಇಲ್ಲಿನ ಶಿವರಾಯ ಮತ್ತು ವನದುರ್ಗೆ ಭಕ್ತರಿಗೆ ಕ್ಷಿಪ್ರ ವರ ಮತ್ತು ದುಷ್ಟರಿಗೆ ಸಂಕಟ ನೀಡುವ ಶಕ್ತಿಕೇಂದ್ರವಾಗಿದೆ . ಗರಡಿಗಳು ಮನಸ್ಸು ಮತ್ತು ದೇಹವನ್ನು ಪಕ್ವಗೊಳಿಸುವ ಕೇಂದ್ರವಾಗಿದ್ದು ಉತ್ತಮ ಮನಸ್ಸುಗಳನ್ನು ಜೊತೆಯಾಗಿಸುವ ಕೇಂದ್ರವಾಗಲಿ ಎಂದರು.


ಸಮಿತಿಯ ಗೌರವಾಧ್ಯಕ್ಷ ಸುರೇಂದ್ರ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದೈವಸ್ಥಾನದ ನಿರ್ಮಾಣಕ್ಕೆ ಸಹಕರಿಸಿದವರನ್ನು ತಂತ್ರಿಗಳನ್ನು ,ದಾನಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.


ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ , ಬಸ್ರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರ ಅಪ್ಪಣ್ಣ ಹೆಗ್ಡೆ , ವೈ, ಗೌತಮ್ ಹೆಗ್ಡೆ , ಬಾರಕೂರು ಶಾಂತಾರಾಮ ಶೆಟ್ಟಿ ,ಗಣೇಶ್ ಕುಂದರ್ , ಕೂಡ್ಲಿ ಗಣಪತಿ ಉಡುಪ, ನಾಗರಾಜ್ ಭಟ್ , ಗಣೇಶ್ ಭಟ್ ಬನ್ನಾಡಿ , ಗೀರೀಶ್ ಶರ್ಮಾ , ಶ್ರೀನಿವಾಸ ಶೆಟ್ಟಿಗಾರ್ , ರಾಘು ಪೂಜಾರಿ , ಸಮಿತಿಯ ಪ್ರಧಾನ ಕಾರ್ಯದರ್ಶಿ ರಕ್ಷಿತ್ , ಜೊತೆ ಕಾರ್ಯದರ್ಶಿ ಪ್ರಮೋದ್ ಪೂಜಾರಿ, ಕೋಶಾಧಿಕಾರಿ ಜಗದೀಶ್ ಪೂಜಾರಿ ,ಸತೀಶ್ ಅಮೀನ್ , ಅಶೊಕ್ ಪೂಜಾರಿ ಇನ್ನಿತರರು ಉಪಸ್ಥಿತರಿದ್ದರು.

ರಾಜು ಟಿ ಪೂಜಾರಿ ಪ್ರಾರ್ಥಿಸಿ , ಜೀಣೋದ್ಧಾರ ಸಮಿತಿಯ ಅಧ್ಯಕ್ಷ ರಾಘವ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸೀತಾರಾಮ ಶೆಟ್ಟಿ ಸ್ವಾಗತಿಸಿ ದಾಮೋದರ್ ಶರ್ಮ ನಿರೂಪಿಸಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com