ಬ್ರಹ್ಮಾವರ : ಚಿಕ್ಕ ಮಕ್ಕಳನ್ನು ಮೆಹಂದಿಯಂತ ಕಾರ್ಯಕ್ರಮದಲ್ಲಿ ಕುಣಿಯಲು ಕರೆದುಕೊಂಡು ಹೋಗುವ ಪೋಷಕರಿಂದ ಮಧ್ಯಪಾನ, ತಂಬಾಕು ಸೇವನೆಯಂತ ದುಶ್ಚಟ ಆರಂಭಕ್ಕೆ ಕಾರಣವಾಗುವುದು ಹೆಚ್ಚು ಎಂದು ಜನ ಜಾಗೃತಿ ವೇದಿಕೆಯ ವಲಯ ಅಧ್ಯಕ್ಷ ಉಪ್ಪೂರು ರಾಜು ಪೂಜಾರಿ ಹೇಳಿದರು.
ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಉಪ್ಪೂರು ವಲಯ, ಸರಕಾರಿ ಪ್ರೌಢ ಶಾಲೆ ಕೊಳಲಗಿರಿ ಶಾಲಾ ಸಭಾ ಭವನದಲ್ಲಿ ಜರುಗಿದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ತಂಬಾಕು ವಿರೋಧಿ ಕರ ಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿ, ಶಾಲೆಯಲ್ಲಿ ಶಿಕ್ಷಣ ನೀಡಿದರೆ ಮನೆಯವರು ಮಕ್ಕಳಿಗೆ ವಿದ್ಯಾರ್ಥಿ ದೆಸೆಯಲ್ಲಿ ಸಾಮಾಜಿಕ ವ್ಯವಸ್ಥೆ ಮತ್ತು ಧಾರ್ಮಿಕ ಶಿಕ್ಷಣ ನೀಡಬೇಕು ಎಂದರು.
ಸಂಪನ್ಮೂಲ ವ್ಯಕ್ತಿ ಅಶ್ವಿನ್ ಜೋಸ್ ಮಾತನಾಡಿ, ತಂಬಾಕು ವ್ಯಕ್ತಿಯನ್ನು ಹಾಳು ಮಾಡುವುದಲ್ಲದ ಪರಿಸರದ ಜನರನ್ನ ಮನುಷ್ಯರ ಆರೋಗ್ಯವನ್ನು ಕೂಡಾ ಹಾಳು ಮಾಡುವ ಮಹಾಮಾರಿ ವಿದ್ಯಾರ್ಥಿಗಳು ತಂಬಾಕು ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತರಾಗಬೇಕು ಎಂದರು.
ತಾಲೂಕು ಯೋಜನಾಧಿಕಾರಿ ದಿನೇಶ್ ಶೇರಿಗಾರ್, ಶಾಲಾ ಮುಖ್ಯೋಪಾಧ್ಯಾಯಿನಿ ಸಂಧ್ಯಾ ಸರಸ್ವತಿ ,ಕೊಳಲಗಿರಿ ಎ ಒಕ್ಕೂಟದ ಅಧ್ಯಕ್ಷೆ ಸಂಪಾ, ವಲಯದ ಮೇಲ್ವಿಚಾರಕಿ ಬಾಬಿ, ರಮೇಶ್ ಎನ್. ಶಶಿಕಲಾ ಉಪಸ್ಥಿತರಿದ್ದರು.
ಶಾಲಾ ವಿದ್ಯಾರ್ಥಿಗಳು ಹಾಗೂ ಅನೇಕ ಪೋಷಕರು ಉಪಸ್ಥಿತರಿದ್ದರು