ಬಾರಕೂರು ಹೊಸಾಳ ಬ್ರಹ್ಮಬೈದರ್ಕಳ ಗರಡಿಗೆ ಕೇರಳ ತಿರುವನಂತಪುರದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಮುಖ್ಯಸ್ಥ ಮಹಾರಾಜ ಪದ್ಮನಾಭ ವರ್ಮ ಭೇಟಿ
Published
1
ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ನವೀಕೃತಗೊಂಡು ಪುನರ್ ಪ್ರತಿಷ್ಠಾಪನೆಗೊಂಡ ಬಾರಕೂರು ಹೊಸಾಳ ಬ್ರಹ್ಮಬೈದರ್ಕಳ ಗರಡಿಗೆ ವಿಶ್ವದಲ್ಲಿ ಅತೀ ಹೆಚ್ಚು ಅನಂತ ಸಂಪತ್ತು ಹೊಂದಿದ ಕೇರಳತಿರುವನಂತಪುರದ ಶ್ರೀ ಅನಂತ ಪದ್ಮನಾಭಸ್ವಾಮಿ ದೇವಸ್ಥಾನದ ಮುಖ್ಯಸ್ಥ ಮಹಾರಾಜರಾದ ಪದ್ಮನಾಭ ವರ್ಮರು ಶುಕ್ರವಾರ ಭೇಟಿ ನೀಡಿದ್ದಾರೆ.
ಕನ್ನಡಿಗರಾಗಿದ್ದು ಬಾರಕೂರು ರಾಜವಂಶದವರಾದ ಅವರ ಪೂರ್ವಿಕರು ಇಲ್ಲಿನ ಅನೇಕ ದೇವಸ್ಥಾನಗಳ ನಿರ್ಮಾಣ ಮತ್ತು ಜೀರ್ಣೋದ್ಧಾರ ಗೊಳಿಸಿ ನಿತ್ಯೋತ್ಸವ ನಾಡು ಎಂದು ಬಾರಕೂರು ಇಂದಿಗೂ ಖ್ಯಾತಿಯಾಗಿದೆ. ರಕ್ತ ಚಂದನಮರದಿಂದ ನಿರ್ಮಾಣಗೊಂಡ ಇಲ್ಲಿನ ಧರ್ಮಶಾಲೆಯ ಪುರಾತನ ಶ್ರೀ ಮಾಸ್ತಿ ಅಮ್ಮನವರ ದೇವಸ್ಥಾನದಲ್ಲಿ ಇವರ ಪೂರ್ವಿಕರು ನಂಬಿದ ನಾಗ ಸಾನಿಧ್ಯ ಇದ್ದು, ಇಂದು ಅವರು ಅಲ್ಲಿಗೆ ಕೂಡಾ ಭೇಟಿ ನೀಡಿ ಪೂಜಾ ಕಾರ್ಯದಲ್ಲಿ ಭಾಗಿಯಾಗಿದ್ದರು.
ಸಾಂಪ್ರದಾಯಕವಾಗಿ ಕೆಂಪು ಕಲ್ಲಿನಿಂದ ನಿರ್ಮಿಸಿದ ಗರಡಿಯನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿ ಕನ್ನಡದಲ್ಲೆ ಮಾತನಾಡಿದ ಅವರು ೩೫ ವರ್ಷದ ಹಿಂದೆ ಬಾರಕೂರು ಗರಡಿಗೆ ಬಂದ ನೆನಪನ್ನು ಬಿಚ್ಚಿಟ್ಟರು.
Advertisement. Scroll to continue reading.
ಪೂರ್ಣಕುಂಭ ಸ್ವಾಗತದೊಂದಿಗೆ ಮಹಾರಾಜರನ್ನು ಗರಡಿಗೆ ಬರಮಾಡಿಕೊಳ್ಳಲಾಯಿತು. ಅವರೊಂದಿಗೆ ಅವರ ಆಪ್ತ ಕಾರ್ಯದರ್ಶಿ ರಾಮ ಮೋಹನ್ ಆಗಮಿಸಿದ್ದರು. ಗರಡಿಯ ವತಿಯಿಂದ ಅವರನ್ನು ಸನ್ಮಾನಿಸಲಾಯಿತು. ಬಾರಕೂರು ಗ್ರಾಮಪಂಚಾಯತಿ ಅಧ್ಯಕ್ಷ ಶಾಂತಾರಾA ಶೆಟ್ಟಿ, ಗರಡಿಯ ಸಮಿತಿಯ ಪಧಾಧಿಕಾರಿಗಳಾದ ಡಾ, ವೈ. ಎಸ್. ಹೆಗ್ಡೆ ಯಡ್ತರೆ , ರಾಘವ ಶೆಟ್ಟಿ , ಗೌತಮ್ ಹೆಗ್ಡೆ ಯಡ್ತರೆ , ರಘು ಪೂಜಾರಿ , ರಕ್ಷಿತ್ ,ರಜತ್ , ರಾಜು ಟಿ ಪೂಜಾರಿ, ಸೀತಾರಾಮ ಶೆಟ್ಟಿ ಇನ್ನಿತರು ಉಪಸ್ಥಿತರಿದ್ದರು.