ಕರಾವಳಿ

ಬ್ರಹ್ಮಾವರ : ಮುಂಗಾರು ಮಳೆ ಚುರುಕು; ಕೃಷಿ ಕಾರ್ಯ ಆರಂಭ

1

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ಕರಾವಳಿ ಭಾಗದ ರೈತರು ಕೆಲವು ಭಾಗದಲ್ಲಿ ನಾಟಿ ಕಾರ್ಯ ಆರಂಭಗೊಂಡರೆ ಇನ್ನು ಕೆಲವು ಭಾಗದಲ್ಲಿ ಉಳುಮೆ ಕಾರ್ಯ ಆರಂಭಗೊಂಡಿದೆ.
ಬಹುತೇಕ ಭಾಗದಲ್ಲಿ ಯಾಂತ್ರೀಕೃತ ಬೇಸಾಯಕ್ಕೆ ನೆಚ್ಚಿಕೊಂಡ ರೈತರು ಉಳುಮೆ ಮತ್ತು ನಾಟಿ ಕಟಾವು ಸೇರಿದಂತೆ ಎಲ್ಲವೂ ಯಾಂತ್ರೀಕರಣಗೊಂಡಿದೆ.


ಸಾಂಪ್ರದಾಯಕವಾಗಿ ಎತ್ತು ಕೋಣಗಳ ಮೂಲಕ ಉಳುಮೆ ಮಾಡಿ ಮಾನವ ಶಕ್ತಿಯಿಂದ ನಾಟಿ ಕಟಾವು ಮಾಡುತ್ತಿರುವಾಗ ಗದ್ದೆಯ ಅಂಚುಗಳಲ್ಲಿ ಸಂಚರಿಸುತ್ತಿರುವ ರೈತರು ಇದೀಗ ಉಳುಮೆ ಯಂತ್ರ ಕಟಾವು ಮತ್ತು ನಾಟಿ ಯಂತ್ರಗಳು ಸಂಚರಿಸಲು ಅಗಲವಾದ ದಾರಿ ಬೇಕಾಗುತ್ತದೆ.


ಕೆಲವೊಂದು ಭಾಗದಲ್ಲಿ ಬೃಹತ್ ಯಂತ್ರಗಳು ಸಂಚರಿಸಲು ಆಗದಂತ ಪರಿಸ್ಥಿತಿ ಮಣ್ಣು ಮೃದುವಾಗಿ ಹೂತು ಹೋಗುವ ಸ್ಥಿತಿ ಇದೆಲ್ಲ ಸಮಸ್ಯೆಗಳ ನಡುವೆ ಮತ್ತು ಜಗತ್ತಿನಾದ್ಯಂತ ಆವರಿಸಿದ ಕೋರೊನದಂತ ಭೀಕರ ಸಾಂಕ್ರಾಮಿಕ ರೋಗದ ನಡುವೆ ಅನ್ನದಾತ ರೈತ ಮಾತ್ರ ಪ್ರತೀ ವರ್ಷ ಆಹಾರ ಹೆಚ್ಚಳಕ್ಕೆ ಪ್ರಯತ್ನ ಮಾಡುತ್ತಲೇ ಇರುತ್ತಾನೆ.


ಇದೆಲ್ಲದರ ನಡುವೆ ರೈತ ಕುಟುಂಬದ ಯುವಕರು ಗದ್ದೆಗೆ ಬರುವುದು ವಿರಳವಾಗುತ್ತಿರುವ ದಿನದಲ್ಲಿ ಬಾರಕೂರು ಬಂಡೀಮಠ ಬಳಿ 6 ನೇ ತರಗತಿ ವಿದ್ಯಾರ್ಥಿಯೋರ್ವ ತಮ್ಮ ಪೂರ್ವೀಕರು ಮಾಡುತ್ತಿರುವ ಗದ್ದೆಗೆ ಮನೆಯವರೊಂದಿಗೆ ಆಸಕ್ತಿಯಿಂದ ಕೃಷಿ ಕಾರ್ಯದಲ್ಲಿ ತೊಡಗಿಸಿಕೊಂಡ ದೃಶ್ಯ ಕಂಡು ಬಂತು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com