ಅರೆ ಹೌದಾ!

WATCH : ಬಂದೂಕುಧಾರಿ ಹಂತಕರನ್ನು ಪೊರಕೆ ಹಿಡಿದು ಓಡಿಸಿದ ಮಹಿಳೆ!

1

ಹರ್ಯಾಣ : ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಬಂದೂಕುಧಾರಿಗಳು ಗುಂಡಿನ ಮಳೆ ಸುರಿಸುತ್ತಿದ್ದ ವೇಳೆ ಮಹಿಳೆಯೊಬ್ಬರು ಪೊರಕೆ ಮೂಲಕ ಸಾಹಸ ಮೆರೆದಿರುವ ಘಟನೆ ನಡೆದಿದೆ. ಹೌದು, ಹರ್ಯಾಣ ರಾಜ್ಯದ ಭಿವಾನಿ ಜಿಲ್ಲೆಯ ದಬಾರ್ ಕಾಲೋನಿಯಲ್ಲಿ ಇಂತಹುದೊಂದು ಆಶ್ಚರ್ಯಕರ ಘಟನೆ ನಡೆದಿದೆ.

ನಾಲ್ವರು ಅನಾಮಧೇಯ ಬಂದೂಕುಧಾರಿ ಹಂತಕರು ಕೊಲೆ ಆರೋಪಿ ಹರಿ ಕಿಶನ್ ಅಲಿಯಾಸ್ ಹರಿಯಾ ಎಂಬಾತನನ್ನ ಟಾರ್ಗೆಟ್ ಮಾಡಿದ್ದರು. ಆತನನ್ನು ಕೊಲ್ಲಲು ನಾಲ್ವರು ಬಂದೂಕುಧಾರಿಗಳು ಎಲ್ಲೆಂದರಲ್ಲಿ ಗುಂಡು ಹಾರಿಸಲು ಆರಂಭಿಸಿದ್ದರು.

ಸೋಮವಾರ ಮಧ್ಯಾಹ್ನ 2 ಬೈಕ್‌ಗಳಲ್ಲಿ ಆಗಮಿಸಿದ್ದ ನಾಲ್ವರು ಹಂತಕರು, ಕೊಲೆ ಆರೋಪಿಯಾದ ಹರಿಯಾನನ್ನು ಹುಡುಕುತ್ತಿದ್ದರು, ಆತ ಕಂಡಿದ್ದೇ ತಡ ಗುಂಡಿನ ಮಳೆ ಸುರಿಸಲು ಆರಂಭಿಸಿದ್ದರು.

Advertisement. Scroll to continue reading.

ಕೊಲೆ ಆರೋಪಿ ಹರಿಯಾ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯಿ ತಂಡದ ರವಿ ಬಾಕ್ಸರ್ ಎಂಬಾತನನ್ನು ಹತ್ಯೆ ಮಾಡಿದ್ದ ಆರೋಪ ಎದುರಿಸುತ್ತಿದ್ದಾನೆ. ಸದ್ಯ ಜಾಮೀನು ಪಡೆದು ಹೊರ ಬಂದಿದ್ದ ಹರಿಯಾ, ತನ್ನ ಕುಟುಂಬಸ್ಥರ ಜೊತೆ ವಾಸವಿದ್ದ. ಈ ವೇಳೆ ಈತನನ್ನು ಕೊಲ್ಲಲು ನಾಲ್ವರು ಹಂತಕರು ಆಗಮಿಸಿದ್ದರು.

ನಾಲ್ವರು ಬಂದೂಕುಧಾರಿಗಳು ಹಲವು ಸುತ್ತಿನ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಹರಿಯಾ ಮನೆಯೊಳಗೆ ಓಡುತ್ತಾನೆ. ಆ ವೇಳೆ ಘಟನಾ ಸ್ಥಳಕ್ಕೆ ಮಹಿಳೆಯೊಬ್ಬರು ತನ್ನ ಮನೆಯ ಪೊರಕೆಯನ್ನು ಕೈನಲ್ಲಿ ಹಿಡಿದು ದುಷ್ಕರ್ಮಿಗಳ ವಿರುದ್ಧ ಹೋರಾಟಕ್ಕೆ ನಿಲ್ಲುತ್ತಾಳೆ. ಈಕೆ ಪೊರಕೆ ಹಿಡಿದು ಬಂದೂಕುಧಾರಿಗಳ ಎದುರಿಗೆ ನಿಂತಿದ್ದ ಸಿಸಿಟಿವಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಪೊರಕೆ ಹಿಡಿದು ನಿಂತ ಮಹಿಳೆಗೂ ಕೊಲೆ ಆರೋಪಿ ಹರಿಯಾಗೂ ಯಾವುದೇ ಸಂಬಂಧ ಇಲ್ಲ. ಆಕೆಗೆ ಹರಿಯಾನ ಪರಿಚಯವೂ ಇಲ್ಲ. ಆದರೆ, ತನ್ನ ಮನೆ ಬಳಿ ಗುಂಡಿನ ದಾಳಿ ನಡೆಯುತ್ತಿದೆ ಎಂದು ಅರಿತ ಕೂಡಲೇ ಸಿಟ್ಟಿಗೆದ್ದ ಮಹಿಳೆ ಪೊರಕೆ ಹಿಡಿದು ಹೊರಗೆ ಬಂದಿದ್ದಳು. ಅಷ್ಟೇ ಅಲ್ಲ, ಹಂತಕರ ಬೆನ್ನಟ್ಟಿದ್ದಾಳೆ.

ಮಹಿಳೆ ಮೇಲೆ ಗುಂಡಿನ ದಾಳಿ ನಡೆಸಿ ಹೆಸರಿಸಲು ಯತ್ನಿಸಿದ ಹಂತಕರು, ಸೋಲೊಪ್ಪಿಕೊಂಡು ಹಂತಕರು ಘಟನಾ ಸ್ಥಳದಿಂದ ಪರಾರಿಯಾಗಿದ್ದಾರೆ

Advertisement. Scroll to continue reading.

ಮಹಿಳೆ ಮಧ್ಯ ಪ್ರವೇಶ ಮಾಡುವ ವೇಳೆಗಾಗಲೇ ಹಂತಕರು 8 ರಿಂದ 10 ಸುತ್ತು ಗುಂಡು ಹಾರಿಸಿದ್ದರು. ಈ ಪೈಕಿ 4 ಗುಂಡುಗಳು ಹರಿಯಾನ ದೇಹವನ್ನು ಹೊಕ್ಕಿದ್ದವು. ಗಂಭೀರವಾಗಿ ಗಾಯಗೊಂಡಿದ್ದ ಆತನನ್ನು ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಘಟನೆಯ ವಿಚಾರ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದರು. ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ವೇಳೆ ನಾಲ್ವರು ಹಂತಕರು ಹರಿಯಾನನ್ನು ಸುತ್ತುವರೆದಿದ್ದ ದೃಶ್ಯ ಕಾಣಬಹುದು. ಜೊತೆಯಲ್ಲೇ ಪೊರಕೆ ಹಿಡಿದು ಮಹಿಳೆ ಓಡಿ ಬಂದು ಹರಿಯಾನನ್ನು ರಕ್ಷಿಸಿದ ಸನ್ನಿವೇಶ ಕೂಡಾ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ತನ್ನ ಧೈರ್ಯ ಹಾಗೂ ಶೌರ್ಯದಿಂದ ವ್ಯಕ್ತಿಯೊಬ್ಬನ ಜೀವ ಉಳಿಸಿದ ಮಹಿಳೆಯ ಕಂಡು ಬೆರಗಾಗಿದ್ದಾರೆ. ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ನೆಟ್ಟಿಗರೂ ಕೂಡಾ ಮಹಿಳೆಯ ಧೈರ್ಯಕ್ಕೆ ಹುಬ್ಬೇರಿಸಿದ್ದಾರೆ. ಈ ಬುದ್ದಿವಂತ ಮಹಿಳೆಗೆ ಸರ್ಕಾರ ಪ್ರಶಸ್ತಿ ನೀಡಬೇಕು ಎಂದಿದ್ದಾರೆ.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com