ರಾಷ್ಟ್ರೀಯ

ಸುರಂಗದಿಂದ ಪಾರಾಗಿ ಬಂದರೂ ತಂದೆಯ ಮುಖ ಕೊನೆಯ ಬಾರಿ ಜೀವಂತವಾಗಿ ನೋಡಲಾಗಲಿಲ್ಲ

1

ರಾಂಚಿ: ಉತ್ತರಾಖಂಡದ ಸಿಲ್ಕ್ಯಾರಾ ಸುರಂಗದಲ್ಲಿ 17 ದಿನಗಳ ಕಾಲ ಸಿಲುಕಿದ್ದ 41 ಕಾರ್ಮಿಕರು ರಕ್ಷಿಸಲ್ಪಟ್ಟಿದ್ದಾರೆ. ಆದರೆ, ಈ 41 ಕಾರ್ಮಿಕರನ್ನು ಸುರಂಗದಿಂದ ಸುರಕ್ಷಿತವಾಗಿ ಹೊರತರುವುದಕ್ಕೂ ಕೆಲವೇ ಗಂಟೆಗಳ ಮುನ್ನ ಕಾರ್ಮಿಕನೊಬ್ಬನ ತಂದೆ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.

ಹೌದು, ಸುರಂಗದಿಂದ ರಕ್ಷಣೆಗೊಳಗಾದ ಕಾರ್ಮಿಕ ಭಕ್ತು ಅವರ ತಂದೆ ಜಾಖರ್ಂಡ್ ಮೂಲದ ಬಾಸೆಟ್ ಅಲಿಯಾಸ್ ಬರ್ಸಾ ಮುರ್ಮು (70) ಮಗನ ರಕ್ಷಣೆಗೂ ಕೆಲವೇ ಗಂಟೆಗಳ ಮುನ್ನ ಮೃತಪಟ್ಟಿದ್ದಾರೆ. ಪೂರ್ವ ಸಿಂಗ್‍ಭೂಮ್ ಜಿಲ್ಲೆಯ ಬಹ್ದಾ ಗ್ರಾಮದ ನಿವಾಸಿ ಬರ್ಸಾ ಮುರ್ಮು ಮಂಗಳವಾರ ಬೆಳಗ್ಗೆ 8 ಗಂಟೆಗೆ ತಮ್ಮ ಹಾಸಿಗೆಯ ಮೇಲೆ ಕುಳಿತಿದ್ದಾಗಲೇ ಕುಸಿದು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Advertisement. Scroll to continue reading.

ನವೆಂಬರ್ 12 ರಂದು ತಮ್ಮ ಮಗ ಸುರಂಗದೊಳಗೆ ಸಿಲುಕಿದ್ದಾಗಿನಿಂದಲೂ ಬರ್ಸಾ ಮುರ್ಮು ಆಘಾತಕ್ಕೊಳಗಾಗಿದ್ದರು. ಭಕ್ತು ಸೇರಿದಂತೆ ಒಟ್ಟು 41 ಕಾರ್ಮಿಕರು ಸುರಂಗದಿಂದ ಹೊರಬಂದ ಕೇವಲ 12 ಗಂಟೆ ಮೊದಲು ಬರ್ಸಾ ಮುರ್ಮು ಸಾವನ್ನಪ್ಪಿರುವುದಾಗಿ ಕುಟುಂಬದ ಸದಸ್ಯರು ತಿಳಿಸಿದ್ದಾರೆ.

ಬರ್ಸಾ ಮುರ್ಮು ತನ್ನ ಮಗನ ರಕ್ಷಣೆಗೆ ಸಂಬಂಧಿಸಿದ ಮಾಹಿತಿಗಾಗಿ ಕಾತರದಿಂದ ಕಾಯುತ್ತಿದ್ದರು. ಆದರೆ ಅವರು ತಮ್ಮ ಹಾಸಿಗೆ ಮೇಲೆ ಕುಳಿತಿದ್ದಾಗ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಇದು ಹೃದಯಾಘಾತ ಎನ್ನಲಾಗುತ್ತಿದೆಯಾದರೂ ಅವರ ವೈದ್ಯಕೀಯ ವರದಿ ಇನ್ನೂ ಬಂದಿಲ್ಲ ಎಂದು ದುಮಾರಿಯಾ ಪೆÇಲೀಸ್ ಠಾಣೆಯ ಪ್ರಭಾರಿ ಅಧಿಕಾರಿ ಸಂಜೀವನ್ ಓರಾನ್ ತಿಳಿಸಿದ್ದಾರೆ.

ಜಾಖರ್ಂಡ್‍ನ ಇತರ 14 ಕಾರ್ಮಿಕರೊಂದಿಗೆ ಭಕ್ತು ಸದ್ಯ ಏಮ್ಸ್ ರಿಷಿಕೇಶ್‍ನಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ 41 ಕಾರ್ಮಿಕರೊಂದಿಗೆ ಭಕ್ತು 17 ದಿನಗಳ ಸಾವಿನ ದವಡೆಯಿಂದ ಪಾರಾಗಿ ಬಂದ ಸಂಭ್ರವನ್ನು ತಂದೆಯ ಸಾವು ಕಸಿದುಕೊಂಡಿದೆ.
ಕೊನೇ ಬಾರಿ ಜೀವಂತವಾಗಿ ನೋಡಲು ಸಾಧ್ಯವಾಗದೇ ಹೋಗಿರುವುದು ದುರಂತವಾಗಿದೆ

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com