ರಾಜ್ಯ

ನನಗೆ ರಾಜಕಾರಣ ಗೊತ್ತಿಲ್ಲ: ವದಂತಿಗಳಿಗೆ ತೆರೆ ಎಳೆದ ಡಾಲಿ

0

ಬೆಂಗಳೂರು: ನಟ ಡಾಲಿ ಧನಂಜಯ್ ಕಾಂಗ್ರೆಸ್ ಪಕ್ಷ ಮೂಲಕ ರಾಜಕೀಯ ಪ್ರವೇಶಿಸುತ್ತಾರೆ, ಮುಂದಿನ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕ್ಷೇತ್ರದಿಂದ ಪ್ರತಾಪ್ ಸಿಂಹ ವಿರುದ್ಧ ಸ್ಪರ್ಧಿಸುತ್ತಾರೆ ಎಂಬ ಸುದ್ದಿಗೆ ನಟ ಬ್ರೇಕ್ ಹಾಕಿದ್ದಾರೆ.

ಈ ವದಂತಿಗಳಿಗೆ ಸ್ಪಷ್ಟನೆ ನೀಡಿರುವ ಡಾಲಿ ಧನಂಜಯ್, ನನಗೆ ರಾಜಕಾರಣ ಗೊತ್ತಿಲ್ಲ, ಸದ್ಯಕ್ಕೆ ನಾನು ಈ ಕ್ಷೇತ್ರಕ್ಕೆ ಬರಲ್ಲ. ಸಿನಿಮಾ ರಂಗದಲ್ಲಿ ಸಾಕಷ್ಟು ಕನಸು ಇದೆ ಅಲ್ಲೇ ಕೆಲಸ ಮಾಡ್ತೇನೆ ಎಂದಿದ್ದಾರೆ.

Advertisement. Scroll to continue reading.

ಯಾವುದೇ ಕೆಲಸ ಮಾಡಬೇಕಾದರೆ ಅದರಲ್ಲೆ ಮುಳಗಬೇಕು, ಶೇಕಡಾ 100ರಷ್ಟು ಶ್ರದ್ಧೆ, ಪ್ರಯತ್ನ ಹಾಕಲೇಬೇಕು, ಹಾಗಾದರೆ ಮಾತ್ರ ಅದರಲ್ಲಿ ಯಶಸ್ಸು ಸಿಗುವುದು. ನನ್ನ ಸಿನಿಮಾ, ಜನರ ಪ್ರೀತಿ ಸಿಕ್ಕಿರುವುದು ದೊಡ್ಡದು ಅದರಲ್ಲೇ ಇನ್ನು ತುಂಬಾ ಕೆಲಸ ಮಾಡುವುದಿದೆ. ನಾನು ಸಿನಿಮಾ ಮಾಡ್ತೇನೆ, ನನ್ನದು ಕನಸಿದೆ. ನಟನಾಗಿ ತುಂಬಾ ಕನಸು ಕಟ್ಟಿಕೊಂಡು ಈ ಫೀಲ್ಡ್ ಗೆ ಬಂದಿದ್ದಿನಿ. ನಟನಾಗಿ, ನಿರ್ಮಾಪಕನಾಗಿ ಕೆಲಸ ಮಾಡಬಹುದಲ್ಲ, ರಾಜಕೀಯದಿಂದ ನನಗೆ ಯಾವುದೇ ಮಾಹಿತಿ ಬಂದಿಲ್ಲ ಎಂದರು.

ನನಗೆ ಎಲ್ಲಾ ಪಕ್ಷಗಳ ಸ್ನೇಹಿತರಿದ್ದಾರೆ. ಯಾರೇ ಕರೆದರು ನಾನು ಕ್ಯಾಂಪೇನ್ ಗಳಿಗೆ ಹೋಗಿಲ್ಲ. ನನಗೆ ಅದರಲ್ಲಿ ಇನ್ವಾಲ್ ಹಾಗೋಕೆ ಇಷ್ಟ ಇಲ್ಲ. ನಾನು ಕಾಮನ್ ಮ್ಯಾನ್ , ಕಾಮನ್ ಮ್ಯಾನ್ ಆಗಿಯೇ ಇರಲು ಇಷ್ಟ ಪಡ್ತೇನೆ. ಜೂನ್ ನಲ್ಲಿ ʻಕೋಟಿʼ ಅನ್ನೋ ಸಿನಿಮಾ ಬರಲಿದ್ದು, ಅದರಲ್ಲಿ ನಾನು ಕಾಮಾನ್ ಮ್ಯಾನ್ ಸಿನಿಮಾ ನೋಡಿ ತುಂಬಾ ಇಷ್ಟವಾಗುತ್ತೆ. ಖಂಡಿತವಾಗಿಯೂ ಎಂಪಿ ಚುನಾವಣೆ ಕ್ಯಾಂಪೇನ್ ಗೆ ಹೋಗುವ ಯೋಚನೆ ಮಾಡಿಲ್ಲ ಎಂದು ಹೇಳಿದರು.

Advertisement. Scroll to continue reading.
Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com