ಮೂಡಬಿದಿರೆ : ಮಕ್ಕಳಿಗಾಗಿ ಮಹಾಭಾರತ ರಾಮಾಯಣದ ಕಥೆಗಳನ್ನು ಅನಿಮೇಷನ್ ಮೂಲಕ ನೀಡುವ ಉದ್ದೇಶದಿಂದ “ವ್ಯಾಸ” ಎಂಬ ಕನ್ನಡದ ಆ್ಯಪ್ ಮಾರ್ಚ್ 8 ರಂದು ಲೋಕಾರ್ಪಣೆಗೊಳ್ಳಲಿದೆ.
ಪ್ರಥಮ ಸೀರೀಸ್ ನಲ್ಲಿ “ಸರ್ಪಮೇಧ” ಕಥೆ ಇದ್ದು, ಸುಮಾರು 8 ರಿಂದ 10 ಎಪಿಸೋಡ್ಸ್ ಪ್ರತಿ ಭಾನುವಾರ ಬೆಳಿಗ್ಗೆ 10 ಘಂಟೆಗೆ ಪ್ರಸಾರಗೊಳ್ಳಲಿದೆ. ಇದರ ಪ್ರೋಮೋ ಹಾಗೂ ಆ್ಯಪ್ ಚಾಲನೆ ಮೂಡಬಿದಿರೆಯ ಸಮಾಜ ಮಂದಿರದಲ್ಲಿ ಮಾರ್ಚ್ 8ರಂದು ಸಂಜೆ 4 ಗಂಟೆಗೆ ನಡೆಯಲಿದೆ.
Advertisement. Scroll to continue reading.
ಕನ್ನಡದ ಈ ವಿನೂತನ ಪ್ರಯೋಗಕ್ಕೆ ನಾಡಿನ ಗಣ್ಯರು ಅಂದು ಚಾಲನೆ ನೀಡಲಿದ್ದಾರೆ. ಇದು ಸಂಪೂರ್ಣ ಉಚಿತ ಓ ಟಿ ಟಿ ಯಾಗಿದ್ದು, ಜಗತ್ತಿನಲ್ಲೇಡೆ ವೀಕ್ಷಿಸಬಹುದಾಗಿದೆ ಎಂದು ವ್ಯಾಸ ನಿರ್ಮಾಪಕಿ ಬಿ. ಮೇಘನಾ ಶೆಣೈ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.