ಬೆಂಗಳೂರು : ನಿರೀಕ್ಷಿಸಿದಂತೆ ಜನತಾ ಕರ್ಫ್ಯೂ ಯಶಸ್ವಿಯಾಗಿಲ್ಲ. ಮೂಲಭೂತ ಸೌಕರ್ಯ ಹೆಚ್ಚಿಸಲು ಒಮ್ಮೆಲೆ ಸಾಧ್ಯವಿಲ್ಲ. ನೋಡಿಕೊಂಡು ಸಿಎಂ ಜೊತೆ ಚರ್ಚಿಸಿ ಮೇ 12 ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ. ಕೊರೋನಾ ಹರಡುವುದನ್ನು ತಡೆಗಟ್ಟಬೇಕಿದೆ. 14 ದಿನಗಳಲ್ಲಿ ಚೈನ್ ಬ್ರೇಕ್ ಮಾಡಬಹುದಾಗಿದೆ.
ಮೇ 15 ರ ನಂತರ ಲಸಿಕೆ ರಾಜ್ಯಕ್ಕೆ ಬರಲಿದೆ.
ಸಾವಿನ ಪ್ರಮಾಣ ಕಡಿಮೆ ಮಾಡಲು ನಿರತರಾಗಿದ್ದೇವೆ. 18 ರಿಂದ 44 ವರ್ಷದವರಿಗೆ ಹೆಚ್ಚು ಲಸಿಕೆ ನೀಡಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಕೋವಿಡ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ
Advertisement. Scroll to continue reading.
ಕೋವಿಡ್ ಯೋಧನಾಗಿ ವೈದ್ಯನಾಗಿ ಕೆಲಸ ಮಾಡುತ್ತಿದ್ದೇನೆ. ರಾಜೀನಾಮೆ ಕೊಟ್ಟು, ಇಲ್ಲಿಗೆ ಕಷ್ಟ ಪಟ್ಟು ಬಂದಿದ್ದೇನೆ. ರಾಜಕೀಯ ಮಾತನಾಡುವುದಿಲ್ಲ. ರೇಣುಕಾಚಾರ್ಯ ಬಗ್ಗೆ ಗೌರರವಿದೆ ಎಂದು ರೇಣುಕಾಚಾರ್ಯ ಹೇಳಿಕೆಗೆ ಅವರು ತಣ್ಣಗೆ ಉತ್ತರಿಸಿದ್ದಾರೆ.