ಸೊರಬ : ಲಾರಿ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಂಕರವಳ್ಳಿಯಲ್ಲಿ ನಡೆದಿದೆ. ಕೆ.ಹನೀಫ್ ಸಾಬ್(55) ಮೃತ ಪಟ್ಟವರು. ಬೆಲ್ಲದ ಸಾಗಾಣಿಕೆಯ ಖಾಲಿ ಟ್ಯಾಂಕರ್ ಸೊರಬ ಮಾರ್ಗವಾಗಿ ಆಗಮಿಸುತ್ತಿತ್ತು. ಈ ವೇಳೆ ಹನೀಫ್ ಸಾಬ್ ಗೆ ಡಿಕ್ಕಿ ಹೊಡೆದಿದೆ. ಬಳಿಕ ಎರಡು ಮರಗಳಿಗೆ ಡಿಕ್ಕಿ ಹೊಡೆದಿದ್ದು, ಈ ವೇಳೆ ಒಂದು ಮರ ಧರೆಗುರುಳಿದೆ. ಲಾರಿ ಚಾಲಕ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕಿರಣ ಮತ್ತು ಚಂದ್ರಗುತ್ತಿಯ ಮಹೇಶ್ ಗಾಯಗೊಂಡಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.