ವರದಿ : ದಿನೇಶ್ ರಾಯಪ್ಪನಮಠ
ಕೊರೋನಾ ಎರಡನೇ ಅಲೆ ಇಡೀ ದೇಶವನ್ನೇ ಕಷ್ಟಕ್ಕೆ ದೂಡಿದೆ. ಈ ನಡುವೆ ಆಕ್ಸಿಜನ್ ಕೊರತೆ ಉಂಟಾಗಿದೆ. ಸಾವಿರಾರು ಮಂದಿ ಇದರಿಂದ ಸಾವನ್ನಪ್ಪುತ್ತಿದ್ದಾರೆ. ಇದಕ್ಕೆಲ್ಲಾ ಕಾರಣ ಸರ್ಕಾರದ ವೈಫಲ್ಯ ಎಂದು ಕೋಟ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಂಕರ್ ಕುಂದರ್ ಟೀಕಿಸಿದ್ದಾರೆ. ಯಡಿಯೂರಪ್ಪ ಸರ್ಕಾರ ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುತ್ತಿದೆ. ಅದರಲ್ಲಿಯೂ ಕೇಂದ್ರದಿಂದ ಆಕ್ಸಿಜನ್ ತರಿಸುವಲ್ಲಿ ಸುಪ್ರೀಂಕೋರ್ಟ್ ಗೆ ಹೋಗಬೇಕಾಯಿತು. ಆಡಳಿತ ಸರ್ಕಾರ ತೆಗೆದುಕೊಳ್ಳುವ ನಿರ್ಧಾರ ಜನಸಾಮಾನ್ಯರಿಗೆ ಹೊರೆಯಾಗಬಾರದು. ನಿನ್ನೆ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಿಂದ ಕೂಲಿ ಕಾರ್ಮಿಕರಿಗೆ ಕಷ್ಟದಾಯಕವಾಗಿದೆ. ತರಕಾರಿ, ಹಾಲುಗಳೆಲ್ಲ ದಿನವಿಡೀ ಇದ್ದರೂ ಅದನ್ನು ತರಲು ಹೋದವರ ಮೇಲೆ ಪೊಲೀಸರು, ಅಧಿಕಾರಿಗಳು ಹಿಡಿದರೆ, ಹಲ್ಲೆಯಾದರೆ ಯಾರು ಕಾಪಾಡಬೇಕು? ಸರ್ಕಾರದ ಈ ನಿರ್ಧಾರದಿಂದ ತೊಂದರೆಯಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕೋವಿಡ್ ನಿಂದಾಗಿರುವ ತೊಂದರೆಗಳ ಜೊತೆಗೆ ಸರ್ಕಾರದ ನಿರ್ಧಾರವೂ ಜನರಿಗೆ ಹೊಡೆತ ನೀಡುತ್ತಿದೆ. ಕಾರ್ಮಿಕರಿಗೆ ಹೋಗಿ ಬರಲು ಅನುಕೂಲತೆ ಮಾಡಿಕೊಡುವುದು ಉತ್ತಮ ಎಂದರು.
Advertisement. Scroll to continue reading.