ವರದಿ : ದಿನೇಶ್ ರಾಯಪ್ಪನಮಠ
ಕುಂದಾಪುರ : ಕೊರೋನಾ ಹಾವಳಿ ಇಡೀ ದೇಶವನ್ನೇ ನಲುಗಿಸುತ್ತಿದೆ. ಕರ್ನಾಟಕದಲ್ಲೂ ಎಲ್ಲೆ ಮೀರಿ ಕೊರೋನಾ ಸೋಂಕಿತರ ಸಂಖ್ಯೆ ಬೆಳೆಯುತ್ತಿದೆ. ಉಡುಪಿ ಜಿಲ್ಲೆಯೂ ಹಿಂದೆ ಬಿದ್ದಿಲ್ಲ. ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ರಾಜ್ಯ ಸರ್ಕಾರ ಮೇ 10 ರಿಂದ 24 ರ ವರೆಗೆ ಲಾಕ್ ಡೌನ್ ಘೋಷಿಸಿದೆ. ಸದ್ಯಕ್ಕೆ ಜನತಾ ಕರ್ಫ್ಯೂ ಜಾರಿಯಲ್ಲಿದೆ.
ಅನಾವಶ್ಯಕವಾಗಿ ತಿರುಗಾಡುವವರಿಗೆ ಬ್ರೇಕ್ ಹಾಕಲಾಗುತ್ತಿದೆ. ಆದರೂ ಉಡುಪಿಯಲ್ಲಿ ವಾಹನ ಸವಾರರು ಕ್ಯಾರೇ ಅನ್ನುತ್ತಿಲ್ಲ. ಇಂದು ಕುಂದಾಪುರದಲ್ಲಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಬೈಕ್, ಕಾರುಗಳಲ್ಲಿ ಒಳ ರಸ್ತೆಗಳಲ್ಲಿ ತಿರುಗುತ್ತಿದ್ದವರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಕುಂದಾಪುರ ಠಾಣಾ ಪೊಲೀಸರು ಹಾಗೂ ಕುಂದಾಪುರ ಸಂಚಾರಿ ಠಾಣಾ ಪೊಲೀಸರು ಕಾರ್ಯಚರಣೆ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ. ನೂರಕ್ಕೂ ಅಧಿಕ ವಾಹನಗಳನ್ನು ಸೀಝ್ ಮಾಡಲಾಗಿದ್ದು, ಪೊಲೀಸ್ ಠಾಣಾ ಮುಂಭಾಗ ಬೈಕ್, ಕಾರುಗಳು ಸಾಲಾಗಿ ನಿಂತಿವೆ.
Advertisement. Scroll to continue reading.