ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಕರಾವಳಿ ಜಿಲ್ಲೆಯಲ್ಲಿ ಇದೀಗ ಭತ್ತದ ಕೃಷಿಯ ಚಟುವಟಿಕೆ ಆರಂಭಗೊಂಡಿದೆ. ಒಂದೆಡೆಯಲ್ಲಿ ಗದ್ದೆಯನ್ನು ಉಳುಮೆ ಮಾಡಿ ಭೂಮಿಯ ಮಣ್ಣನ್ನು ಹದ ಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ .ಇನ್ನೊಂದೆಡೆ ಉಡುಪಿ ಬ್ರಹ್ಮಾವರ, ಕೋಟ, ಕುಂದಾಪುರದ ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜ ಮತ್ತು ಸುಣ್ಣ, ಸೆಣಬಿನ ಬೀಜ ಪಡೆಯಲು ಕೃಷಿಕರು ಸಾಲು ಸಾಲಾಗಿ ನಿಲ್ಲುತ್ತಿದ್ದಾರೆ.
ಉಡುಪಿ ವಿಧಾನ ಸಭಾ ಕ್ಷೇತ್ರ ಈ ವರ್ಷ ಯಾವುದೇ ಹಡಿಲು ಭೂಮಿಯನ್ನು ಬಿಡದೆ ಸಂಪೂರ್ಣವಾಗಿ ಭತ್ತದ ನಾಟಿ ಮಾಡುವ ಸಿದ್ಧತೆಯನ್ನು ಉಡುಪಿ ಶಾಸಕ ರಘುಪತಿ ಭಟ್ ನೇತ್ರತ್ವದಲ್ಲಿ ನಡೆಯುತ್ತಿದ್ದು, ಉಡುಪಿ ರೈತ ಸಂಪರ್ಕ ಕೇಂದ್ರದಲ್ಲಿ ಈ ವರ್ಷ ಬಿತ್ತನೆ ಬೀಜವನ್ನು ಹೆಚ್ಚು ಸಂಗ್ರಹಿಸಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ರೈತರ ಹಿತದೃಷ್ಟಿಯಲ್ಲಿ ಎಲ್ಲಾ ರೈತರ ಸಂಪರ್ಕ ಕೇಂದ್ರಗಳು ಬೆಳಿಗ್ಗೆ ಆರು ಗಂಟೆಗೆ ತೆರೆದಿದ್ದು, ಬೆಳಿಗ್ಗೆ ಹತ್ತು ಗಂಟೆಯ ತನಕ ವಿತರಣೆ ನಡೆಯುತ್ತಿದೆ. ಆ ಬಳಿಕ ಸಿಬ್ಬಂದಿಗಳು ಅಂದಿನ ವಿತರಣಾ ಲೆಕ್ಕಗಳನ್ನ ಮತ್ತು ಕಛೇರಿ ಕೆಲಸವನ್ನು ಮಾಡುತ್ತಿರುವುದು ಕಂಡು ಬರುತ್ತಿದೆ.
Advertisement. Scroll to continue reading.