ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಆಕಾಶವಾಣಿ ಬಳಿಯಲ್ಲಿರುವ ಅಪ್ಪ ಅಮ್ಮ ಅನಾಥಾಲಯದಲ್ಲಿದ್ದ ಮಹಿಳೆಯೊಬ್ಬರು ಇಂದು ನಸುಕಿನಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡುಕೊಂಡಿದ್ದಾರೆ. ದಾಕ್ಷಾಯಿಣಿ ಆಚಾರ್ಯ (45) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಕಳೆದ ಆರು ತಿಂಗಳ ಹಿಂದೆ ನೀತಾ ಪ್ರಭು ಎನ್ನುವವರ ಶಿಫಾರಸ್ಸಿನ ಮೇಲೆ ಪೆರಣಂಕಿಲ ದಾಕ್ಷಾಯಿಣಿಯವರನ್ನು ಅವರ ಸಂಬಂಧಿಕರು ಕರೆತಂದು ಅನಾಥಾಲಯಕ್ಕೆ ಸೇರಿಸಿದ್ದರು.
ಅನಾಥಾಲಯದ ಸಂಚಾಲಕ ಪ್ರಶಾಂತ ಪೂಜಾರಿ ಬ್ರಹ್ಮಾವರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿ ಎಸ್ ಐ ಗುರುನಾಥ್ ಹಾದಿಮನೆ ನೇತ್ರತ್ವದಲ್ಲಿ ಎ ಎಸ್ ಐ ಸುಂದರ ಮತ್ತು ಸಿಬ್ಬಂದಿಗಳು ಘಟನೆಯ ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯರ ಸಹಕಾರದೊಂದಿಗೆ ಶವವನ್ನು ಮೇಲೆತ್ತಿದ್ದಾರೆ. ಬಳಿಕ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶವ ಮಹಜರಿಗಾಗಿ ಇರಿಸಲಾಗಿದೆ.
Advertisement. Scroll to continue reading.