ಕೋಲಾರ : ಮುಳಬಾಗಿಲು ತಾಲೂಕಿನ ವೇಗಮಡುಗು ಗ್ರಾಮದಲ್ಲಿ ಅಕ್ಕ-ತಂಗಿಯರನ್ನು ಉಮಾಪತಿ ಎಂಬ ಯುವಕ ಮದುವೆಯಾಗಿದ್ದಾನೆ. ಕೋಲಾರದ ಪ್ರಸಿದ್ಧ ದೇಗುಲ ಕುರುಡುಮಲೆಯಲ್ಲಿ ಮದುವೆ ಕಾರ್ಯ ನಡೆದಿದೆ. ಯುವತಿಯರ ಮನೆಯಲ್ಲಿ ಮೇ 7 ರಂದು ಆರತಕ್ಷತೆಯೂ ನಡೆದಿದೆ. ಆದರೆ, ಈ ಮದುವೆ ಸಿಕ್ಕಾಪಟ್ಟೆ ಸುದ್ದಿ ಆಗಿತ್ತು. ಫೋಟೋ ಹಾಗೂ ಆಮಂತ್ರಣ ಪತ್ರಿಕೆ ವೈರಲ್ ಆಗಿತ್ತು. ಕೊರೋನಾ ಆಫರ್ ಮದುವೆ ಎಂದು ಟ್ರೋಲ್ ಕೂಡಾ ಆಗಿತ್ತು. ಆದರೆ ಅಸಲಿ ಕಥೆಯೇ ಬೇರೆ.
ತಂಗಿಯ ತ್ಯಾಗ-ಅಕ್ಕನ ಬಾಳು ಬೆಳಗಿತು!
ಉಮಾಪತಿಯೊಂದಿಗೆ ತಂಗಿ ಲಲಿತಾಳ ಮದುವೆ ನಿಶ್ಚಯವಾಗಿತ್ತು. ಲಲಿತಾ ಅಕ್ಕ ಸುಪ್ರಿಯಾ ಹುಟ್ಟು ಮೂಕಿ. ಮಾತು ಬಾರದ ಅಕ್ಕನಿಗೆ ಮದುವೆಯಾಗುವುದಿಲ್ಲ, ಆಕೆಯ ಬದುಕು ಮುಂದೆ ಹೇಗೆ ಎಂದು ಚಿಂತಿತಳಾದ ಸುಪ್ರಿಯಾ, ಉಮಾಪತಿಯಲ್ಲಿ ತನ್ನೊಂದಿಗೆ, ಅಕ್ಕನನ್ನು ಮದುವೆಯಾಗುವಂತೆ ಹೇಳುತ್ತಾಳೆ. ಆಕೆಯ ಮನವಿಗೆ ಉಮಾಪತಿ ಒಪ್ಪಿದ್ದಾನೆ. ಕುಟುಂಬದವರನ್ನೂ ಒಪ್ಪಿಸಿ ಈ ಮದುವೆ ನಡೆದಿದೆ. ತಮಾಷೆಯ ಸಂಗತಿಯಾಗಿದ್ದ ಈ ಘಟನೆ ಇದೀಗ ಸತ್ಯಾಂಶ ಬಯಲಾಗಿ, ತಂಗಿಯ ತ್ಯಾಗಕ್ಕೆ ತಲೆಬಾಗುತ್ತಿದ್ದಾರೆ.
Advertisement. Scroll to continue reading.