ವರದಿ : ದಿನೇಶ್ ರಾಯಪ್ಪನಮಠ
ಉಡುಪಿ: ತೌಖ್ತೇ ಚಂಡಮಾರುತದ ದಿಸೆಯಿಂದ ಉಂಟಾಗಿರುವ ಸಮುದ್ರದ ಪ್ರಕ್ಷುಬ್ಧತೆಯಿಂದ ಕಾಪು ಲೈಟ್ ಹೌಸ್ ನಿಂದ ಸುಮಾರು ಐದು ನಾಟಿಕಲ್ ದೂರದಲ್ಲಿ ಸಮುದ್ರದ ಮಧ್ಯೆ ಬಂಡೆಗಳ ನಡುವೆ ಸಿಲುಕಿಕೊಂಡಿದ್ದ ಮಂಗಳೂರಿನ MRPL ಕಂಪನಿಗೆ ಆಗಮಿಸಬೇಕಾಗಿದ್ದ ಕಚ್ಚಾ ತೈಲವನ್ನು ಭೂಗತ ಪೈಪ್ ಗೆ ಸೇರಿಸುವ ಗುತ್ತಿಗೆ ಪಡೆದಿರುವ K E I – RSOR ಕಂಪನಿಯ ಕೋರಮಂಡಲ ಸಪೋರ್ಟರ್-9 ಎಂಬ ಹೆಸರಿನ Vessel ನಲ್ಲಿರುವ ಒಂಭತ್ತು ಜನರ ರಕ್ಷಣೆ ಮಾಡಲಾಗಿದೆ. ಅವರ ರಕ್ಷಣೆ ಕಾರ್ಯಕ್ಕಾಗಿ ನಿನ್ನೆ ಸಂಜೆಯಿಂದಲೇ ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ರಕ್ಷಣಾ ಸಚಿವ ರಾಜ್ ನಾಥ್ ಸಿಂಘ್, ಕೋಸ್ಟ್ ಗಾರ್ಡ್ ಮುಖ್ಯಸ್ಥ ಅಮೋಲ್ ಶುಕ್ಲಾ ಮೊದಲಾದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಪರಿಣಾಮವಾಗಿ
ಇಂದು ಮುಂಜಾನೆಯಿಂದ ಕೊಚ್ಚಿಯಿಂದಾಗಮಿಸಿದ ನೌಕಾ ಸೇನೆಯ ಹೆಲಿಕಾಪ್ಟರ್ ಹಾಗೂ ಶಿಪ್ ಮೂಲಕ ಕಾರ್ಯಾಚರಣೆ ನಡೆಸಲಾಗಿದ್ದು, ಎಲ್ಲಾ 9 ಜನರನ್ನು ರಕ್ಷಿಸಲಾಗಿದೆ. ಸಂಸದೆಯವರು ಕೋಸ್ಟಲ್ ಗಾರ್ಡ್ ಡಿ.ಐ.ಜಿ ಶ್ರೀ ಎಸ್.ಬಿ. ವೆಂಕಟೇಶ್ ಅವರಿಂದ ಪ್ರತೀ ಕ್ಷಣದ ಮಾಹಿತಿ ಪಡೆಯುತ್ತಾ ಒಂಭತ್ತು ಮಂದಿಯ ರಕ್ಷಣಾ ಕಾರ್ಯದ ಉಸ್ತುವಾರಿ ನಡೆಸಿದರು.
Advertisement. Scroll to continue reading.