ವರದಿ : ಮಹೇಶ್
ಬೈಂದೂರು : ಕಳೆದ ಹಲವು ದಿನಗಳಿಂದ ನಿರಂತರವಾಗಿ ಜೀವದ ಹಂಗನ್ನು ತೊರೆದು ಕ್ಷೇತ್ರದ ವಿವಿಧ ಕಡೆಗಳಲ್ಲಿ ಕರೋನಾ ವಾರಿಯರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಬೈಂದೂರು ವೃತ್ತ ನಿರೀಕ್ಷಕರ ವ್ಯಾಪ್ತಿಯ ಠಾಣೆಗಳ ಸಿಬ್ಬಂದಿಗಳಿಗೆ ಸ್ಥಳೀಯ ಸಮಾಜಮುಖಿ ಸಹಕಾರಿ ಬ್ಯಾಂಕ್ ಗಳಲ್ಲಿ ಒಂದಾದ ಕಂಬದ ಕೋಣೆ ರೈತರ ಸೇವಾ ಸಂಘದ ವತಿಯಿಂದ ಕರೋನಾ ಕಿಟ್ ವಿತರಿಸಲಾಯಿತು. ಈ ಸಮಯದಲ್ಲಿ ಕಂಬದ ಕೋಣೆ ರೈತರ ಸೇವಾ ಸಹಕಾರಿ ಸಂಘ ಉಪ್ಪುಂದ ಇದರ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ, ಬೈಂದೂರು ವೃತ್ತನಿರೀಕ್ಷಕರಾದ ಸಂತೋಷ್ ಕಾಯ್ಕಿಣಿ, ತರಬೇತಿ ನಿರತ ಪಿ.ಎಸ್.ಐ ಸುಹಾಸ್ ನಿರ್ದೇಶಕರಾದ ಈಶ್ವರ, ಕಾರ್ಯನಿರ್ವಹಣಾಧಿಕಾರಿ ವಿಷ್ಣು.ಪೈ ಮತ್ತು ಮ್ಯಾನೇಜರ್ ಚಂದ್ರಯ್ಯ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು
Advertisement. Scroll to continue reading.