Uncategorized

ಪಡುಬಿದ್ರಿ: ಚಂಡಮಾರುತದಿಂದ ಹಾನಿಯಾದ ಬ್ಲೂಫ್ಯಾಗ್ ಬೀಚ್‌ಗೆ ಡಿಸಿ ಭೇಟಿ; ವಾರದೊಳಗೆ ಸಜ್ಜು

0

ವರದಿ: ಶಫೀ ಉಚ್ಚಿಲ

ಕಾಪು: ಅಂತಾರಾಷ್ಟ್ರೀಯ ಮಾನ್ಯತೆ ಪಡೆದ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ಚಂಡಮಾರುತದಿಂದ ಹಾನಿಗೊಳಗಾಗಿದ್ದು, ತಕ್ಷಣವೇ ಪುನರ್ ಸಜ್ಜುಗೊಳಿಸಿ ಪ್ರವಾಸಿಗರ ಆಕರ್ಷಣೆಗೆ ಉಪಯೋಗವಾಗುವಂತೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

ಬುಧವಾರ ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ಗೆ ಭೇಟಿ ನೀಡಿ ಕಡಲ ತೀರದಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶವನ್ನು ವೀಕ್ಷಿಸಿ ಮಾತನಾಡಿದರು. ಬೀಚ್ ನಿರಂತರವಾಗಿ ಸುಸಜ್ಜಿತವಾಗಿ ಮುಂದುವರೆಸಿಕೊಂಡು ಹೋಗಲು ಅವಶ್ಯಕವಾಗಿರುವ ಎಲ್ಲಾ ಉಪಕ್ರಮ ಕೈಗೊಳ್ಳಲು ಅಗತ್ಯ ಕ್ರಮವಹಿಸುವಂತೆ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಸೋಮಶೇಖರ ಬನವಾಸಿ ಅವರಿಗೆ ಸೂಚಿಸಿದರು.

Advertisement. Scroll to continue reading.

ತಕ್ಷಣವೇ ಬೀಚ್ ಸ್ವಚ್ಛಗೊಳಿಸಿ ಮೊದಲಿದ್ದಂತೆ ಸುಸ್ಥಿತಿಗೆ ತರುವುದಾಗಿ ಬ್ಲೂ ಫ್ಲ್ಯಾಗ್ ಬೀಚ್ ವ್ಯವಸ್ಥಾಪಕ ವಿಜಯ ಶೆಟ್ಟಿ ಭರವಸೆ ನೀಡಿದರು ಪ್ರವಾಸೋದ್ಯಮ ಇಲಾಖೆ ಸಿಬ್ಬಂದಿ ರಮೇಶ್ ದೇವಾಡಿಗ, ಪಡುಬಿದ್ರಿ ಗ್ರಾಮ ಸಹಾಯಕ ಜಯರಾಂ ಮೊದಲಾದವರು ಉಪಸ್ಥಿತರಿದ್ದರು.ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್‌ಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಬೀಚ್‌ನಲ್ಲಿ ಆಗಿರುವ ಹಾನಿಯನ್ನು ವೀಕ್ಷಿಸಿದರು.

Click to comment

You May Also Like

Copyright © 2023 Diksoochi News. Diksoochi News is independent & freelance news agency from Udupi, Karnataka providing authentic & false proof news to your finger tips, Diksoochi is not associated with any media body and not subsidiary of any media agency and it works independently Contact us for any inquiry : diksoochinews22@gmail.com