ವರದಿ : ಶಫೀ ಉಚ್ಚಿಲ
ಕಾಪು: ಕಾಪು ತುಳುನಾಡು ಹಿಂದೂ ಸೇನೆ ವತಿಯಿಂದ ಕಾಪು ಪುರಸಭೆ ವ್ಯಾಪ್ತಿಯ 110ಕ್ಕೂ ಅಧಿಕ ಬಡ ಕುಟುಂಬಗಳಿಗೆ ಪಡಿತರ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮವನ್ನು ಕಾಪು ಪೊಲೀಸ್ ವೃತ್ತ ನಿರೀಕ್ಷಕ ಪ್ರಕಾಶ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಬಡವರಿಗೆ ಆಹಾರ ಕಿಟ್ ನೀಡಿರುವ ತುಳುನಾಡು ಹಿಂದೂ ಸೇನೆ ಯುವಕರ ಕಾರ್ಯ ಶ್ಲಾಘನೀಯ. ತಮ್ಮ ದುಡಿಮೆಯ ಒಂದಂಶದಲ್ಲಿ ಸಮಾಜದ ಇತರ ವರ್ಗದವರನ್ನೂ ಸದೃಢಗೊಳಿಸಲು ಪ್ರಯತ್ನಿಸುವ ಮೂಲಕ ಸಂಘ-ಸಂಸ್ಥೆಗಳಿಗೆ ಮಾದರಿಯಾಗಿದ್ದಾರೆ ಎಂದರು.
Advertisement. Scroll to continue reading.
ಈ ಸಂದರ್ಭ ಕಾಪು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ, ಕಾಪು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು, ತುಳುನಾಡು ಹಿಂದೂ ಸೇನೆ ಉಪಾಧ್ಯಕ್ಷ ರವಿ ಬಿಂದಾಸ್, ಪ್ರಧಾನ ಕಾರ್ಯದರ್ಶಿ ಯಾದವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.