ಸ್ಯಾಂಡಲ್ ವುಡ್ ನ ಖ್ಯಾತ ನಟ ಅರ್ಜುನ್ ಸರ್ಜಾ ಆಂಜನೇಯ ಸ್ವಾಮಿಯ ಮಹಾನ್ ದೈವಭಕ್ತರಾಗಿದ್ದು ಇತ್ತೀಚಿಗಷ್ಟೇ ಅವರು ನಿರ್ಮಿಸಿರುವ ಆಂಜನೇಯ ದೇಗುಲ ಲೋಕಾರ್ಪಣೆ ಗೊಂಡಿದೆ. ಚೆನ್ನೈನ ಗುರುಗಂಬಕ್ಕಮ್ ನಲ್ಲಿ ಬ್ರಹತ್ ಗಾತ್ರದ ಆಂಜನೇಯ ಸ್ವಾಮಿಯ ಮೂರ್ತಿಯನ್ನು ಅವರು ನಿರ್ಮಿಸಿದ್ದಾರೆ.
ಜುಲೈ 1 ರಂದು ನಡೆದ ಕುಂಭಾಭಿಷೇಕದಲ್ಲಿ ಇಡೀ ಸರ್ಜಾ ಕುಟುಂಬವೇ ಭಾಗಿಯಾಗಿತ್ತು. ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದೇವಸ್ಥಾನವನ್ನು ಉದ್ಘಾಟಿಲಾಯಿತು. ಈ ಸಂದರ್ಭದಲ್ಲಿ ಎಲ್ಲರನ್ನು ಆಮಂತ್ರಿಸಲು ಸಾಧ್ಯವಿಲ್ಲದ ಕಾರಣ ಉದ್ಘಾಟನಾ ಸಮಾರಂಭವನ್ನು ನೇರಪ್ರಸಾರದ ಮೂಲಕ ವೀಕ್ಷಣೆ ಯನ್ನು ಮಾಡುವ ಅವಕಾಶ ಕಲ್ಪಿಸಿದ್ದರು.
ಕೊರೊನಾ ಕಾರಣದಿಂದಾಗಿ ಮೇಘನಾ ಮತ್ತು ಜೂ. ಚಿರು ಕಾರ್ಯಕ್ರಮದಲ್ಲಿ ಭಾಗಿಯಾಗದೆ ಬೆಂಗಳೂರಿನಲ್ಲೇ ಇದ್ದರು.
Advertisement. Scroll to continue reading.
ಅರ್ಜುನ್ ಸರ್ಜಾ ಅವರು ಜೂ.ಚಿರುಗೆ ಚೆನ್ನೈ ನೀಡಲೇ ವಿಡಿಯೋ ಕಾಲ್ ಮೂಲಕ ತಾವು ಕಟ್ಟಿಸಿದ ದೇವಸ್ಥಾನದ ದರುಶನ ಮಾಡಿಸಿದ್ದಾರೆ.
ಸದ್ಯದಲ್ಲೇ ದೇವರ ದರ್ಶನಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಲಾಗುವುದು.
Advertisement. Scroll to continue reading.