ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: 98 ವರ್ಷ ಇತಿಹಾಸದ ಗ್ರಾಮೀಣ ಭಾಗವಾದ ಹೇರೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯೊಂದನ್ನು ಉಳಿಸುವ ಮತ್ತು ಆಂಗ್ಲ ಮಾಧ್ಯಮವಾಗಿ ಪರಿವರ್ತಿಸುವ ಪ್ರಯತ್ನ ನಡೆದಿದೆ. ಇತ್ತೀಚೆಗೆ ಹಳೆ ವಿದ್ಯಾರ್ಥಿಗಳು ಊರವರು ದಾನಿಗಳ ನೆರವಿನಿಂದ ಎಲ್. ಕೆ.ಜಿ ತರಗತಿಯನ್ನು ಹ್ಯಾಂಗ್ಯೋ ಐಸ್ಕ್ರೀಂ ಪ್ರೈ.ಲಿ ನ ಮುಖ್ಯಸ್ಥ ಜಗದೀಶ್ ಆರ್ ಪೈ ಉದ್ಘಾಟಿಸಿದರು.
ಬಳಿಕ ಅವರು ಮಾತನಾಡಿ, ಭಾಷೆ ಒಂದು ಸಂವಹನ ಮಾಧ್ಯಮ ಹೊರತು ಭಾಷೆಯೇ ಮುಖ್ಯವಲ್ಲ. ನಾನು ಕೂಡಾ ಸರಕಾರಿ ಶಾಲೆಯಲ್ಲಿ ಕಲಿತವನು ಸರಕಾರಿ ಶಾಲೆಯ ಕುರಿತು ಕೀಳರಿಮೆ ಬೇಡ ಎಂದರು. ಬಹುತೇಕರು ನಾನಾ ಭಾಗದಲ್ಲಿ ಸರಕಾರಿ ಶಾಲೆಯಲ್ಲಿ ಕಲಿತು ಇಂದು ಉನ್ನತ ಸ್ಥಾನದಲ್ಲಿರುವ ಪ್ರೊ.ಡಾ.ಬಿ.ಶಿವಾನಂದ ನಾಯಕ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಎಚ್. ಸದಾನಂದ ಪೂಜಾರಿ, ದಿನೇಶ್ ಶೆಟ್ಟಿ ಗ್ರಾಮ ಪಂಚಾಯತ್ ಸದಸ್ಯ ಉದಯ ಕಾಮತ್, ವಿದ್ಯಾ ಟ್ಯುಟೋರಿಯಲ್ ಪ್ರಿನ್ಸಿಪಾಲ್ ಸತೀಶ ಕಾಡೋಳಿ ಶಾಲೆಗೆ ನಾನಾ ಕೊಡುಗೆಯನ್ನು ನೀಡಿದರು. ಚಾಂತಾರು ಗ್ರಾಮ ಪಂಚಾಯತ್ನ ಅಧ್ಯಕ್ಷೆ ಮೀರಾ ಸದಾನಂದ ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
Advertisement. Scroll to continue reading.
ಎಸ್.ಡಿ.ಎಮ್.ಸಿ ಅಧ್ಯಕ್ಷೆ ಚಂದ್ರಕಲಾ, ನಿವೃತ್ತ ಅಧ್ಯಾಪಕ ಸದಾನಂದ ಶೆಟ್ಟಿ, ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಕೆ.ಉಮೇಶ್ ಶೆಟ್ಟಿ, ದಾನಿಗಳಾದ ಚೇತನ್ ಕುಮಾರ್ ಶೆಟ್ಟಿ , ಪ್ರಭಾಕರ್ ತಿಮ್ಸನ್, ಮಾಜಿ ಎಸ್.ಡಿ.ಎಮ್.ಸಿ ಅಧ್ಯಕ್ಷ ದತ್ತಾತ್ರೇಯ ಮಲ್ಯ, ಭಾಸ್ಕರ ಆಚಾರ್ಯ, ಸಂತೋಷ್ ಜತ್ತನ್, ವಿಠ್ಠಲ ಸುವರ್ಣ,ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕಮಲಾಕ್ಷ ಪೈ, ಸಂತೋಷ್ ಪಿ, ಗ್ರಾಮ ಪಂಚಾಯತ್ ಸದಸ್ಯರಾದ ಹೇಮಾ ಅಶೋಕ್, ಸುಮಿತ್ರಾ, ಹೇರೂರು ರಿಕ್ಷಾ ಚಾಲಕರು ಮತ್ತು ಹಳೇ ವಿದ್ಯಾರ್ಥಿ ಸಂಘದ ಸದಸ್ಯರು ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಅಶೋಕ ಪೂಜಾರಿಯವರು ಸಮುದಾಯವನ್ನು ಸಂಘಟಿಸಿದರೆ, ನೂಥನವಾಗಿ ನಿಯುಕ್ತಿಗೊಂಡ ಶಾಲೆಯ ಮುಖ್ಯೋಪಾಧ್ಯಾಯಿನಿ ಮಂಜುಳಾ ಜಯಕರ್ ರವರ ಮುಂದಾಳತ್ವಕ್ಕೆ ಸಹಶಿಕ್ಷಕಿಯರಾದ ಲಕ್ಷ್ಮಿ , ಸ್ನೇಹಲತಾ ಬೆಂಬಲ ನೀಡಿದ್ದಾರೆ.
ಶಾಲೆಯಲ್ಲಿ ಈಗಾಗಲೆ ಒಟ್ಟು 40 ವಿದ್ಯಾರ್ಥಿಗಳು ಇದ್ದು, ಎಲ್. ಕೆ.ಜಿ ಗೆ 15 ಮಕ್ಕಳು ನೋಂದಾಯಿಸಿದ್ದಾರೆ.
Advertisement. Scroll to continue reading.