ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರಗತಿ ಮೈದಾನ ಸಮಗ್ರ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಮತ್ತು ಐದು ಅಂಡರ್ ಪಾಸ್ʼಗಳನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅವರು ಮಾಡಿರುವ ಕಾರ್ಯವೊಂದು ಸಕತ್ ವೈರಲ್ ಆಗಿದೆ.
ಹೌದು, ಕಾಗದದ ಚೂರು, ನೀರಿನ ಬಾಟಲಿ ಸೇರಿ ಕೆಲ ಕಸ-ಕಡ್ಡಿ ಅಲ್ಲೇ ಬಿದ್ದಿದ್ದನ್ನು ಗಮನಿಸಿದ ಪ್ರಧಾನಿ ಮೋದಿ, ಸ್ವತಃ ಸ್ವಚ್ಛತಾ ಕಾರ್ಯ ಮಾಡಿದ್ದಾರೆ.
ಪ್ರಧಾನಿ ಮೋದಿ ತಮ್ಮ ಕೈಗಳಿಂದ ಕೆಲ ಕಾಗದದ ತುಂಡು ಮತ್ತು ಖಾಲಿ ನೀರಿನ ಬಾಟಲಿಯನ್ನ ಎತ್ತಿಕೊಂಡು ಓಡಾಡುತ್ತಿರುವ ವೀಡಿಯೋ ವೈರಲ್ ಆಗಿದೆ.
Advertisement. Scroll to continue reading.
ಪ್ರಗತಿ ಮೈದಾನ ಸಮಗ್ರ ಟ್ರಾನ್ಸಿಟ್ ಕಾರಿಡಾರ್ ಯೋಜನೆಯ ಮುಖ್ಯ ಸುರಂಗ ಸೇರಿದಂತೆ ಐದು ಅಂಡರ್ ಪಾಸ್ʼಗಳನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದರು.
In this article:Diksoochi news, diksoochi Tv, diksoochi udupi, PM Modi, swatch bharath
Click to comment