ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಛೇರಿ ಉಡುಪಿ, ಕ್ಷಯ ಘಟಕ ಬ್ರಹ್ಮಾವರ ಪ್ರಾಥಮಿಕ ಆರೋಗ್ಯ ಕೇಂದ್ರ ಕೊಳಲಗಿರಿ ಮತ್ತು ಹಾವಂಜೆ ಗ್ರಾಮ ಪಂಚಾಯತಿ ಕ್ಷಯ ನಿರ್ಮೂಲನಾ ಸಮಿತಿ ಕೊಳಲಗಿರಿ ಇವರ ಆಶ್ರಯದಲ್ಲಿ ಕ್ಷಯರೋಗ ಪತ್ತೆ, ಆಂದೋಲನ ಮತ್ತು ತಪಾಸಣಾ ಶಿಬಿರ ಸೋಮವಾರ ಹಾವಂಜೆ ಮಂಜುನಾಥ ಸಭಾ ಭವನದಲ್ಲಿ ಜರುಗಿತು.
ಈ ಸಂದರ್ಭ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿ ಡಾ.ಚಿದಾನಂದ ಮಾತನಾಡಿ, ರಾಜ್ಯದಲ್ಲಿ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಹಾವಂಜೆ ಗ್ರಾಮದಲ್ಲಿ ಅತೀ ಹೆಚ್ಚು ಕ್ಷಯ ರೋಗ ಪತ್ತೆ ಆದ ಕಾರಣ ಕ್ಷಯರೋಗದ ಕುರಿತು ಮಾಹಿತಿ ನೀಡಲು ಮತ್ತು ಮುನ್ನೆಚ್ಚರಿಕೆ ಕ್ರಮ, ರೋಗ ಲಕ್ಷಣಗಳ ಕುರಿತು ಪ್ರತಿ ಮನೆಗಳಿಗೆ ಆರೋಗ್ಯ ಇಲಾಖೆಯವರು ಮತ್ತು ಆಶಾ ಕಾರ್ಯಕರ್ತೆಯರು ಬಂದು ಸಮೀಕ್ಷೆ ಮಾಡಲಿದ್ದಾರೆ.
ಆರೋಗ್ಯವಂತ ಮನುಷ್ಯರನ್ನು ಕೊಲ್ಲುವ 10 ಮಾರಣಾಂತಿಕ ಖಾಯಿಲೆಯಲ್ಲಿ ಕ್ಷಯ ಕೂಡಾ ಒಂದು ಆರಂಭದಲ್ಲಿ ತಡೆಗಟ್ಟಿ ಚಿಕಿತ್ಸೆ ಮಾಡಿದಲ್ಲಿ ಆರೋಗ್ಯವಂತರಾಗಬಹುದು. 2025 ರ ಒಳಗೆ ಕ್ಷಯ ಮುಕ್ತ ದೇಶವನ್ನ ಮಾಡಲು ಸಾರ್ವಜನಿಕರು ಸಹಕರಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಪ್ರತೀ ಮನೆಗಳಿಗೆ ಜಾಗೃತಿಗಾಗಿ ಮಾಡಲಾದ ಸ್ಟಿಕ್ಕರನ್ನು ಹಾವಂಜೆ ಗ್ರಾಮ ಪಂಚಾಯತಿ ಅಧ್ಯಕ್ಷ ಅಜಿತ್ ಗೋಳಿಕಟ್ಟೆ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಕೊಳಲಗಿರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿಂದು ಭಟ್ ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರದ ಡಾ. ಏರಿಕ್ ಮತ್ತು ಶಿಬಿರದ ಸಂಯೋಜಕ ಕ್ಷಯರೋಗ ತಪಾಸಣೆಯ ಬ್ರಹ್ಮಾವರ ತಾಲೂಕು ಹಿರಿಯ ಮೇಲ್ವಿಚಾರಕ ಅಲಂದೂರು ಮಂಜುನಾಥ ಉಪಸ್ಥಿತರಿದ್ದರು.
ಹಾವಂಜೆ ಭಾಗದಲ್ಲಿ 3 ದಿನಗಳ ಕಾಲ 893 ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಲಿದ್ದಾರೆ.