ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಾತ್ರದಲ್ಲಿರುವ ಶಿವಖೋಡ ದೇವಸ್ಥಾನಕ್ಕೆ ತೆರಳಿದ್ದ ಯಾತ್ರಾರ್ಥಿಗಳ ಬಸ್ ಮೇಲೆ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ. ಪರಿಣಾಮ ಬಸ್ ಪ್ರಪಾತಕ್ಕೆ ಉರುಳಿಬಿದ್ದಿದ್ದು, 10 ಭಕ್ತರು ಮೃತಪಟ್ಟಿದ್ದಾರೆ. ಕಾಂದಾ ಚಂಡಿ ಮೊರ್ ಬಳಿ ಈ ಘಟನೆ ನಡೆದಿದೆ.
ಶಿವಖೋಡ ಹಿಂದೂ ದೇವಸ್ಥಾನಕ್ಕೆ ಭೇಟಿ ನೀಡಿ ವಾಪಾಸಾಗುತ್ತಿದ್ದ ವೇಳೆ ಶಂಕಿತ ಉಗ್ರರು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಹಲವು ಗುಂಡುಗಳು ಯಾತ್ರಾರ್ಥಿಗಳ ದೇಹ ಹೊಕ್ಕಿದೆ. ಇತ್ತ ಚಾಲಕನಿಗೂ ಗುಂಡು ತಗುಲಿದೆ. ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪ್ರಪಾತಕ್ಕೆ ಉರುಳಿ ಬಿದ್ದಿದೆ.
Advertisement. Scroll to continue reading.![](http://diksoochinews.com/wp-content/uploads/2023/10/diksoochi_inline.jpeg)
![](http://diksoochinews.com/wp-content/uploads/2023/10/diksoochi_inline.jpeg)
ದೇವಸ್ಥಾನದಿಂದ ಮರಳುತ್ತಿದ್ದ ವೇಳೆ ಮುಸುಕು ಧರಿಸಿದ ಉಗ್ರರು ಕಾಡಿನಲ್ಲಿ ಅವಿತು ಕುಳಿತಿದ್ದರು. ಹಿಂದೂ ಭಕ್ತರ ಬಸ್ ಟಾರ್ಗೆಟ್ ಮಾಡಿದ ಉಗ್ರರು ಏಕಏಕಿ ಪ್ರತ್ಯಕ್ಷವಾಗಿ ಗುಂಡಿನ ಮಳೆ ಸುರಿಸಿದ್ದಾರೆ.
ರೆಸಾಯಿ ಹಾಗೂ ರೌಜರಿ ಜಿಲ್ಲೆಯ ಗಡಿ ಭಾಗದಲ್ಲಿ ಈ ಉಗ್ರ ದಾಳಿ ನಡೆದಿದೆ. ಹಲವು ಭಕ್ತರು ಗಂಭೀರವಾಗಿ ಗಾಯಗೊಂಡಿರುವುದಾಗಿ ವರದಿಯಾಗಿದೆ.
Advertisement. Scroll to continue reading.![](http://diksoochinews.com/wp-content/uploads/2023/10/diksoochi_inline.jpeg)
![](http://diksoochinews.com/wp-content/uploads/2023/10/diksoochi_inline.jpeg)