ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಗೋವಿಗಾಗಿ ಮೇವು ಅಭಿಯಾನಕ್ಕೆ ಬೆಂಬಲವಾಗಿ ಸಮ್ರದ್ದಿ ಮಹಿಳಾ ಮಂಡಳಿ ಪೇತ್ರಿ, ಶಿವಾನಿ ವಿಪ್ರಾ ಮಹಿಳಾ ಮಂಡಳಿ ಸೂರಾಲು, ಗೆಳೆಯರ ಬಳಗ ಕನ್ನಾರು ಇವರ ನೇತೃತ್ವದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಇರುವ ಹುಲ್ಲನ್ನು ಕಟಾವು ಮಾಡಿ ಆರೂರು ಪುಣ್ಯಕೋಟಿ ಗೋಶಾಲೆಗೆ ನೀಡಿದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಗೋವಿಗಾಗಿ ಮೇವು ಸ್ಥಾಪಕ ಸಂಚಾಲಕ ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ಜಿಲ್ಲೆಯಲ್ಲಿ ಗೋವಿಗಾಗಿ ಮೇವು ಕೇವಲ ಒಂದು ಅಭಿಯಾನವಲ್ಲ. ಇದೊಂದು ಯುವ ಸಮುದಾಯದ ಆಂದೋಲನವಾಗಿರಲಿದೆ ಎಂದರು. ಸಮೃದ್ದಿ ಮಹಿಳಾ ಮಂಡಳಿಯ ಪ್ರಸನ್ನ ಪಿ. ಭಟ್ ಮಾತನಾಡಿ, ಗೋವಿಗಾಗಿ ಮೇವು ನಮ್ಮಂತ ಅದೆಷ್ಟೋ ಮಹಿಳೆಯರಿಗೆ ಪ್ರೇರಣೆ ಜಿಲ್ಲೆಯ ಎಲ್ಲಾ ಮಹಿಳಾ ಸಂಘಟನೆಗಳು ಗೋಮಾತೆಯ ಪುಣ್ಯಕಾರ್ಯದಲ್ಲಿ ಪಾಲ್ಗೊಳ್ಳಬೇಕಾಗಿದೆ ಎಂದರು. ಅರೂರು ಗ್ರಾಮಪಂಚಾಯತ್ ಮಾಜಿ ಉಪಾದ್ಯಕ್ಷ ಗಣೇಶ್ ಕುಲಾಲ್ ಸಂಮ್ರಧ್ದಿ ಮಹಿಳಾ ಮಂಡಳಿ ಪೇತ್ರಿ ಚೇರ್ಕಾಡಿ, ಶಿವಾನಿ ವಿಪ್ರಾ, ಮಹಿಳಾ ಮಂಡಳಿ ಸೂರಾಲು, ಗೆಳೆಯರ ಬಳಗ ಕನ್ನಾರು, ಪು.ಕೋ.ಗೋ. ಭಕ್ತಿ ಭೂಷಣ ದಾಸ್, ಪ್ರಸನ್ನ ಪಿ ಭಟ್, ಸಹನಾ ಕೆ. ಹಬ್ಬಾರ್, ಮಲ್ಲಿಕಾ ಹರೀಶ್ ಶೆಟ್ಟಿ ಚೇರ್ಕಾಡಿ, ಗಣೇಶ ಕುಲಾಲ ಆರೂರು, ಹರಿದಾಸ ಠಾಕೂರ್, ಶೇಖರ ಕುಲಾಲ, ಸುಧೀರ್, ಸುಧೀರ್ ಕುಂದರ್ ಮುಂತಾದವರು ಉಪಸ್ಥಿತರಿದ್ದರು.