ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ: ಕೋವಿಡ್ ಸಂಕಷ್ಟ ನಡುವೆಯೇ ನಾವು ಸ್ವಾವಲಂಬನೆ ಮೂಲಕ ಮತ್ತೆ ಎದ್ದು ನಿಲ್ಲಬೇಕಿದೆ. ಯುವ ಸಬಲೀಕರಣ ಜೊತೆಗೆ ಆರ್ಥಿಕ ಸ್ವಾತಂತ್ರ್ಯ ಎಲ್ಲರಿಗೂ ದೊರೆಯಬೇಕು. ಆಗ ಬಡತನ ನಿರ್ಮೂಲನೆ, ಬಲಿಷ್ಠ ಭಾರತ ನಿರ್ಮಾಣವಾಗುತ್ತದೆ ಎಂದು ಹೆಬ್ರಿ ತಾಲೂಕು ತಹಶೀಲ್ದಾರ್ ಪುರಂದರ ಕೆ ಹೇಳಿದರು. ಅವರು ಹೆಬ್ರಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಡೆದ 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಸಂಭ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.
ತ್ಯಾಗ ಬಲಿದಾನ ದ ಪ್ರತೀಕ ನಮಗೆ ಸ್ವಾತಂತ್ರ್ಯ ದೊರಕಿದೆ. ನಾವೆಲ್ಲ ದೇಶದ ಇತಿಹಾಸ ತ್ಯಾಗದ ವಿಚಾರವನ್ನು ತಿಳಿಯಬೇಕಿದೆ. ಎಲ್ಲಿಯೂ ಐಕ್ಯತೆ ಕೊರತೆಯಾಗದಂತೆ ನಾವು ಕೆಲಸ ಮಾಡಬೇಕಿದೆ ಎಂದ ತಹಶೀಲ್ದಾರ್ ಪುರಂದರ್, ಹೆಬ್ರಿಯ ನೂತನ ತಾಲೂಕಿನ ಸಮಗ್ರ ಅಭವೃದ್ಧಿಗೆ ವೇಗ ದೊರೆತಿದೆ. ತಾಲೂಕು ಪಂಚಾಯತ್,ಪೊಲೀಸ್ ಠಾಣೆ, ಕಾರ್ಮಿಕ ಭವನ,ಸರ್ಕಾರಿ ನೌಕರರಿಗೆ ವಸತಿ ಗೃಹ, ನ್ಯಾಯ ಲಾಯ ಸಂಕೀರ್ಣ, ಸರ್ಕಾರಿ ಕಚೇರಿ ಸಂಕೀರ್ಣ, ಸುಸರ್ಜಿತ ಬಸ್ ನಿಲ್ದಾಣ, ಅಂಬೇಡ್ಕರ್ ಭವನ ತಾಲೂಕು ಪಂಚಾಯತ್, ಗೋಶಾಲೆ, ೨೦ಎಕರೆ ಜಾಗದಲ್ಲಿ ಜವಳಿ ಪಾರ್ಕ್ ನಿರ್ಮಾಣಕ್ಕೆ ಸರ್ಕಾರಿ ಭೂಮಿ ಗುರುತಿಸುವ ಕಾರ್ಯ ನಡೆಯುತ್ತಿದೆ. ಡಿಸೆಂಬರ್ ಅಂತ್ಯದೊಳಗೆ ಹೆಬ್ರಿ ತಾಲೂಕು ಕಚೇರಿ ಕಟ್ಟಡ ಹೆಬ್ರಿ ಮಿನಿ ವಿಧಾನ ಸೌಧ ಕಟ್ಟಡ ಸಂಪೂರ್ಣಗೊಂಡು ಲೋಕಾರ್ಪಣೆಯಾಗಲಿದೆ ಎಂದು ಹೇಳಿದರು.
ಹೆಬ್ರಿ ಸಬ್ ಇನ್ಸ್ಪೆಕ್ಟರ್ ಮಹೇಶ್ ಟಿ. ಎಂ ನೇತೃತ್ವದಲ್ಲಿ ಹೆಬ್ರಿ ಪೊಲೀಸ್ ಮತ್ತು ನಕ್ಸಲ್ ನಿಗ್ರಹ ಪಡೆಯ ಅಧಿಕಾರಿಗಳ ಸಹಕಾರದಲ್ಲಿ ಧ್ವಜಾರೋಹಣ ಪ್ರಕ್ರಿಯೆಗಳು ನಡೆಯಿತು. ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಮತ್ತು ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಸಾಹಿತಿ ಲೇಖಕರಾದ ಮಾಲತಿ ಪೈ. ಕಬ್ಬಿನಾಲೆ, ಶ್ರೀಕರ ಭಾರದ್ವಾಜ್, ಪ್ರದೀಪ್ ಹೆಬ್ಬಾರ್ ಚಾರ, ಸತೀಶ್ ಆಚಾರ್ಯ, ಪಿ. ವಿ.ಆನಂದ ಸಾಲಿಗ್ರಾಮ, ಪ್ರಮೋದ್, ಮಹೇಂದ್ರ ಸೋಮಯಾಜಿ, ಚೈತ್ರ ಕಬ್ಬಿನಾಲೆ, ಮಂಜುನಾಥ್ ಕುಲಾಲ್ ಸುಲತಾ ಹೆಗ್ಡೆ, ಸತೀಶ್ ನಾಯ್ಕ್, ಅರುಣಾ ಹೆಬ್ರಿ, ಭಕ್ರೆ ವಾಸುದೇವ ಭಟ್, ಸವಿತಾ ರತ್ನಾಕರ ಪೂಜಾರಿ, ವಸಂತ ಹೊಳ್ಳ,ಚಂದ್ರ ಶೇಖರ್ ಶೆಟ್ಟಿ ಅವರನ್ನು ಗೌರವಸಲಾಯಿತು.
ಹೆಬ್ರಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲತಿ, ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಸಾದ್ ರಾವ್, ತಾಲೂಕು ಪಂಚಾಯತ್ ಕಾರಯನಿರ್ವಾಹನಾಧಿಕರಿ ಶಶಿಧರ್, ಕಂದಾಯ ನಿರೀಕ್ಷಕ ಹಿತೇಶ್ ಯು.ಬಿ, ಕಂದಾಯ ಸಹಿತ ವಿವಿಧ ಇಲಾಖಾಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಶಿಕ್ಷಕ ಮಾತಿಬೆಟ್ಟು ಪ್ರಕಾಶ್ ಪೂಜಾರಿ ನಿರೂಪಿಸಿ, ಸೀತಾನದಿ ವಿಠ್ಠಲ್ ಶೆಟ್ಟಿ ಸ್ವಾಗತಿಸಿದರು.