Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಮತ್ತು ಉಗ್ರಗಾಮಿ ಕೃತ್ಯಗಳ ಬಗ್ಗೆ ಉನ್ನತಮಟ್ಟದ ತನಿಖೆ ನಡೆಸಬೇಕು: ಹಿಂದು ಜಾಗರಣ ವೇದಿಕೆಯಿಂದ ಮನವಿ

0

ವರದಿ : ಶ್ರೀದತ್ತ ಹೆಬ್ತಿ

ಹೆಬ್ರಿ : ಕರಾವಳಿಯ ಉಡುಪಿ ಮಂಗಳೂರು ಸೇರಿದಂತೆ ಕೊಡಗು ಮತ್ತು ಉತ್ತರ ಕನ್ನಡ ಭಾಗದಲ್ಲಿ ಇತ್ತೀಚೆಗೆ ಕೆಲವು ಅಹಿತಕರ ಘಟನೆಗಳು ವರದಿಯಾಗಿವೆ ದೇಶದ ಭದ್ರತೆ ಮತ್ತು ಆಂತರಿಕ ಸುರಕ್ಷತೆಗೆ ಸವಾಲಾಗಿರುವ ಕೆಲ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳು ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ತಮ್ಮ ಚಟುವಟಿಕೆಗಳನ್ನು ನಡೆಸುತ್ತಿದ್ದು ಇದಕ್ಕೆ ಕೆಲ ಮತೀಯವಾದಿ ಸಂಘಟನೆಗಳು ನೇರ ಬೆಂಬಲ ನೀಡುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆಗಳು ಮಾಹಿತಿ ನೀಡಿವೆ .
ರಾಜಕೀಯ ಸಂಘಟನೆಗಳ ಬಗ್ಗೆ ತನಿಖೆ ನಡೆಸಿ ಅವರ ಆರ್ಥಿಕ ಮೂಲವನ್ನು ಪತ್ತೆ ಹಚ್ಚಿ ಕಠಿಣ ಕ್ರಮ ಜರುಗಿಸಬೇಕು. ಲವ್ ಜಿಹಾದ್ ಮೂಲಕ ಹಿಂದೂ ಯುವತಿಯರನ್ನು ಪ್ರೀತಿಸಿ ಪ್ರೇಮದ ಹೆಸರಿನಲ್ಲಿ ಇಸ್ಲಾಮಿಗೆ ಮತಾಂತರ ಮಾಡಿ ಉಗ್ರಗಾಮಿ ಹಾಗೂ ಸಮಾಜ ಘಾತುಕ ಚಟುವಟಿಕೆಗಳಿಗೆ ಬಳಸಿಕೊಳ್ಳುವ ವ್ಯವಸ್ಥಿತ ಷಡ್ಯಂತ್ರ ಕರಾವಳಿ ಮತ್ತು ಕೊಡಗು ಭಾಗದಲ್ಲಿ ನಡೆಯುತ್ತಿದೆ.ಹಾಗೂ ಹೆಬ್ರಿಯ ಚಾರಾ ಪ್ರದೇಶದಲ್ಲಿ ಮತಾಂತರ ಕೆಲಸಗಳು ನಡೆಯುತ್ತಿದ್ದು ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು. ಸರಕಾರಕ್ಕೆ ಹೆಬ್ರಿಯ ತಹಸಿಲ್ದಾರ್ ಮೂಲಕ ಮಂಗಳವಾರ ಹೆಬ್ರಿಯ ತಾಲ್ಲೂಕು ಕಚೇರಿ ಆವರಣದಲ್ಲಿ ಹಿಂದೂ ಜಾಗರಣ ವೇದಿಕೆ ಹಾಗೂ ಬಿಜೆಪಿ ಪಕ್ಷದ ಪ್ರಮುಖರು ಹೆಬ್ರಿ ತಹಶೀಲ್ದಾರ್ ಪುರಂದರ್ .ಕೆ ಇವರಗೆ ಮನವಿಯನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಹಿಂದೂ ಜಾಗರಣೆ ವೇದಿಕೆಯ ಪ್ರಮುಖರಾದ ರತ್ನಾಕರ್ ಅಮೀನ್ ಅಜೆಕಾರು. ಪ್ರಸಾದ್ ಕೊಂಡಾಡಿ .ದಿನೇಶ್ ಶೆಟ್ಟಿ ಹೆಬ್ರಿ. ಶಮಾ ರೈ ಹೆಬ್ರಿ .ಪ್ರವೀಣ್ ನಾಯ್ಕ್. ರಕ್ಷತ್ ಪ್ರಭು ಹೆಬ್ರಿ, ಸಮೃದ್ಧಿ ಪ್ರಕಾಶ್ ಶೆಟ್ಟಿ, ಸುಧಾಕರ ಹೆಗ್ಡೆ ಹೆಬ್ರಿ , ದಿನೇಶ್ ಹೆಗ್ಡೆ ನಾಡ್ಪಾಲು, ಗಣೇಶ್ ಕುಮಾರ್ ಜರ್ವತ್ತು, ನಾಗೇಂದ್ರ ಹೆಬ್ರಿ, ಸುರೇಶ್ ಪೂಜಾರಿ ಹೆಬ್ರಿ , ಶೇಖರ ಹೆಬ್ರಿ. ಸನತ್ ಕುಮಾರ್ ಬೇಳಂಜೆ, ಮಹೇಶ್ ಶೆಟ್ಟಿ ಬಾದ್ಲು, ರಾಜೇಶ್ ಬೇಳಂಜೆ ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಅಮೃತ್ ಕುಮಾರ್ ಶೆಟ್ಟಿ ಬೇಳಂಜೆ ಸುನೀಲ್ ಪೂಜಾರಿ ಹೆಬ್ರಿ, ಸುದರ್ಶನ್ ಹೆಗ್ಡೆ ಸೋಮೇಶ್ವರ, ಭೋಜ ಶೆಟ್ಟಿ ಬೇಳಂಜೆ, ಸಂತೋಷ್ ನಾಯ್ಕ, ಸೀತಾರಾಮ ಗಾಣಿಗ ಹಾಗೂ ಮತ್ತಿತರರು ಉಪಸ್ಥಿತರಿದ್ದರು .

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!