ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ: ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಗುರುವಾರ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಇಲ್ಲಿನ ಪಡಿತರ ವಿತರಣಾ ವ್ಯವಸ್ಥೆಯನ್ನು ಪರಿಶೀಲಿಸಿದರು.
ಪಡಿತರಕ್ಕೆ ಬಂದ ಕೆಲವು ಮಹಿಳೆಯರೊಂದಿಗೆ ಕೇಂದ್ರ ಸರಕಾರ ಪ್ರತೀ ಕುಟುಂಬಕ್ಕೆ ಹೆಚ್ಚುವರಿ ಪಡಿತರ ನೀಡುತ್ತಿರುವ ಕುರಿತು ವಿಚಾರಿಸಿದರು ಮತ್ತು ಇಲ್ಲಿನ ಗೋದಾಮು ಇನ್ನಿತರ ವ್ಯವಸ್ಥೆಯನ್ನು ಕಂಡು ಮೆಚ್ಚುಗೆ ವ್ಯಕ್ತ ಪಡಿಸಿದರು.
ಬಳಿಕ ಇಲ್ಲಿನ ಪ್ರಧಾನ ಕಛೇರಿಯಲ್ಲಿ ಸಚಿವೆಯನ್ನು ಸಂಘದ ಅಧ್ಯಕ್ಷ ಇರ್ಮಾಡಿ ತಿಮ್ಮಪ್ಪ ಹೆಗ್ಡೆ ಮತ್ತು ಮುಖ್ಯಕಾರ್ಯನಿರ್ವಣಾಧಿಕಾರಿ ಸುಭಾಷ್ ಶೆಟ್ಟಿ ಮತ್ತು ಆಡಳಿತ ಮಂಡಳಿಯ ಇನ್ನಿತರ ಸದಸ್ಯರು ಸೇರಿ ಸಚಿವೆಯನ್ನು ಸಂಘದ ವತಿಯಿಂದ ಗೌರವಿಸಿದರು.
ಇದೇ ಸಂದರ್ಭದಲ್ಲಿ ಬ್ರಹ್ಮಾವರ ಭಾಗದ ಅನೇಕ ಸಮಸ್ಯೆ ಕುರಿತು ಸಾರ್ವಜನಿಕರಿಂದ ಸಚಿವೆಗೆ ಮನವಿ ಸಲ್ಲಿಸಲಾಯಿತು.
ಉಡುಪಿ ಶಾಸಕ ಕೆ. ರಘುಪತಿ ಭಟ್, ಉಡುಪಿ ಗ್ರಾಮಾಂತರ ಬಿಜೆಪಿಯ ಪಧಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು.