ವರದಿ : ಬಿ.ಎಸ್.ಆಚಾರ್ಯ
ಹರೀಶ್ ಬಂಗೇರ ಅವರನ್ನು ವಿದೇಶಿ ಬಂಧನದಿಂದ ಬಿಡಿಸಿ ಮಾತೃಭೂಮಿಗೆ ಕರೆತರಲು ಸೌದಿಯಲ್ಲಿರುವ ಭಾರತೀಯ ರಾಯಭಾರಿ ಅಧಿಕಾರಿಗಳೊಂದಿಗೆ ಸತತ ವಾಗಿ ಪ್ರಯತ್ನಿಸಿದ ಹಿಂದುಳಿದ ಆಯೋಗದ ಅಧ್ಯಕ್ಷರಾದ ಕೆ. ಜಯಪ್ರಕಾಶ್ ಹೆಗ್ಡೆ ಅವರ ಮನೆಗೆ ಹರೀಶ್ ಬಂಗೇರ ಅವರು ಕುಟುಂಬ ಸಮೇತ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಿದ ಜಯಪ್ರಕಾಶ್ ಹೆಗ್ಡೆ, ಮಾಡದ ತಪ್ಪಿಗೆ ಜೈಲುವಾಸ ಅನುಭವಿಸಿದ ಹರೀಶ್ ಬಂಗೇರ ಪರಿಸ್ಥಿತಿ ದೇಶದಲ್ಲಿ ಯಾರಿಗೂ ಬರಬರಬಾರದು. ಬಿಡುಗಡೆಗೆ ಸಹಕರಿಸಿದ ವಿದೇಶಾಂಗ ಸಚಿವಾಲಯ ಸೌದಿಯ ರಾಯಭಾರಿ ಕಚೇರಿಗೆ ಧನ್ಯವಾದ ಎಂದರು.
Advertisement. Scroll to continue reading.
ಈ ಸಂದರ್ಭದಲ್ಲಿ ಹರೀಶ್ ಬಂಗೇರಗೆ ಬೆಂಗಾವಲಾಗಿ ನಿಂತ ಲೋಕೇಶ್ ಅಂಕದಕಟ್ಟೆ ಉಪಸ್ಥಿತರಿದ್ದರು.
In this article:Diksoochi news, diksoochi Tv, diksoochi udupi, Harish Bangera, Jayaprakash Hegde
Click to comment