Connect with us

Hi, what are you looking for?

Diksoochi News

ಕರಾವಳಿ

ಕೋಟ: ಪಾಂಡೇಶ್ಚರ ರಕ್ತೇಶ್ವರಿ ಸನ್ನಿಧಾನದಲ್ಲಿ ವರಮಹಾಲಕ್ಷ್ಮೀ ಕಾರ್ಯಕ್ರಮ

0

ವರದಿ : ದಿನೇಶ್ ರಾಯಪ್ಪನಮಠ
ಕೋಟ: ಶ್ರೀ ಕ್ಷೇತ್ರ ಪಾಂಡೇಶ್ವರ ರಕ್ತೇಶ್ಚರಿ ದೇವಿಯ ಸನ್ನಿಧಾನಲ್ಲಿ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ಶುಕ್ರವಾರ ಸರಳ ರೀತಿಯಲ್ಲಿ ಆಚರಿಸಲಾಯಿತು. ಶ್ರೀ ಕ್ಷೇತ್ರದ ಧರ್ಮದರ್ಶಿ ಕೆ.ವಿ ರಮೇಶ್ ರಾವ್ ಮಾರ್ಗದರ್ಶನದಲ್ಲಿ ವೇ.ಮೂ ಚಂದ್ರಶೇಖರ ಶಾಸ್ತ್ರಿ ನೇತ್ರತ್ವದಲ್ಲಿ ಲಕ್ಷ್ಮೀ ಹೃದಯ ಹೋಮ, ಸ್ಥಳೀಯ ಭಕ್ತಾಧಿಗಳ ಮೂಲಕ ಸಂಕಲ್ಪಕ್ಕೆ ಕುಳ್ಳಿರಿಸಿ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು.ಶ್ರೀ ದೇವಿಗೆ ವಿಶೇಷ ಅಲಂಕಾರ,ಹಣ್ಣುಕಾಯಿ ನೈವೇಧ್ಯ, ಮಹಾಮಂಗಳಾರತಿ ವಿವಿಧ ಪೂಜಾ ಕಾರ್ಯಗಳು ನೆರವೇರಿತು. ಈ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಕೆ.ವಿ ರಮೇಶ್ ರಾವ್ ಪ್ರತಿವರ್ಷ ಭಕ್ತರ ಸಮ್ಮುಖದಲ್ಲಿ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮ ನೆರವೆರುತ್ತಿದೆ.ಅದರಂತೆ ಕಳೆದೆರಡು ವರ್ಷಗಳಿಂದ ಕೋವಿಡ್ ಮಹಾ ಸಾಂಕ್ರಾಮಿಕ ಖಾಯಿಲೆಯಿಂದ ಸರಕಾರ ಕಡಿವಾಣ ಹಾಕಿದೆ. ಈ ಹಿನ್ನಲ್ಲೆಯಲ್ಲಿ ಸಂಕ್ಷಿಪ್ತವಾಗಿ ಸರಳ ರೀತಿಯಲ್ಲಿ ಭಕ್ತರ ಒಗ್ಗೂಡಿಸಿಕೊಂಡು ಈ ಕಾರ್ಯಕ್ರಮವನ್ನು ನೆರವೆರಿಸಿಕೊಂಡು ಬರಲಾಗುತ್ತಿದೆ. ವಿಶ್ವಕ್ಕೆ ಕಂಠಕವಾಗಿ ಕಂಡ ಖಾಯಿಲೆಯನ್ನು ಸಂಪೂರ್ಣವಾಗಿ ಇನ್ನಿಲ್ಲಂದೆ ಮಾಡುವ ಮೂಲಕ ತಾಯೇ ಭಕ್ತರ ಇಷ್ಟಾರ್ಥಗಳನ್ನು ನೆರವೆರುಸುತ್ತಾಳೆ.ಧರ್ಮ ಎಲ್ಲಿಯವರೆಗೆ ನೆಲೆಯೂರುತ್ತದೆಯೋ ಅಲ್ಲಿಯವರೆಗೆ ತಾಯಿ ಭಕ್ತರ ಸಂಕಷ್ಟವನ್ನು ದೂರವಿರಿಸುತ್ತಾಳೆ ಎಂಬ ನಂಬಿಕೆಯೊಂದಿಗೆ ಈ ಎಲ್ಲಾ ಕಾರ್ಯಗಳು ನಿರಂತರವಾಗಿ ನಡೆಯುತ್ತಾ ಇರುತ್ತದೆ ಎಂದು ಆಶಿಸಿದರು.

ವೈದಿಕ ಕಾರ್ಯಕ್ರಮದಲ್ಲಿ ದೇವಳ ಟ್ರಸ್ಟಿ ಕಾರ್ತಿಕ್ ರಾವ್ ಪಾಂಡೇಶ್ವರ ದಂಪತಿಗಳು, ಸುಬ್ರಹ್ಮಣ್ಯ ಉಡುಪ ಕೊರ್ಗಿ, ಲಕ್ಷೀಶ ಭಟ್ ಜನ್ನಾಡಿ, ಶಿವರಾಜ್ ಭಟ್, ವಿಶ್ವನಾಥ ಉಡುಪ ಕಟ್ಕೇರೆ, ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ನಾರಾಯಣ ವಿ ಆಚಾರ್ಯ, ರಕ್ತೇಶ್ವರಿ ಮಹಿಳಾ ಬಳಗದ ಅಧ್ಯಕ್ಷೆ ಅಕ್ಷಯ, ಕಾರ್ಯದರ್ಶಿ ಸುಜಾತ ವೆಂಕಟೇಶ ಪೂಜಾರಿ, ಶೋಭಾ, ಸಂಧ್ಯಾ ರಾವ್, ಸುದರ್ಶನ ಪೂಜಾರಿ, ವೆಂಕಟೇಶ ಪೂಜಾರಿ, ಶ್ರೀಶಾ ಆಚಾರ್ಯ, ಕೃಷ್ಣ ಮರಕಾಲ, ಬಸವ ಮರಕಾಲ, ಅಭಿಜಿತ್ ಪಾಂಡೇಶ್ಚರ ಮತ್ತಿತರರು ಉಪಸ್ಥಿತರಿದ್ದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!