ವರದಿ : ದಿನೇಶ್ ರಾಯಪ್ಪನಮಠ
ಬ್ರಹ್ಮಾವರ : ಜಯ ಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾಧ್ಯಕ್ಷರಾದ ಸತೀಶ ಪೂಜಾರಿ ಅವರ ನೇತೃತ್ವದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 167 ನೇ ಜನ್ಮ ಜಯಂತಿಯನ್ನು ಸರಳವಾಗಿ ಕೋವಿಡ್ ನಿಯಮಗಳನ್ನು ಪಾಲಿಸಿಕೊಂಡು ಬ್ರಹ್ಮಾವರದಲ್ಲಿ ಆಚರಿಸಲಾಯಿತು. ಈ ಸಂದರ್ಭ ಸತೀಶ ಪೂಜಾರಿ ಮಾತನಾಡಿ, ಗುರುಗಳ ತತ್ವಗಳನ್ನು ಜೀವನದಲ್ಲಿ ಪಾಲಿಸಿಕೊಂಡು ಎಲ್ಲರೂ ಆದರ್ಶ ಜೀವನ ನಡೆಸಬೇಕಿದೆ ಎಂದು ತಿಳಿಸಿದರು.
ಉದ್ಯಮಿ ಅರುಣ ಪೂಜಾರಿ ಬ್ರಹ್ಮಾವರ, ವಕೀಲೆ ಪ್ರತಿಮಾ ಎಸ್ ಪೂಜಾರಿ, ಸರ್ಕಾರಿ ಪ್ರೌಢಶಾಲೆ ಮೂಡುಗಿಳಿಯಾರು ಮುಖ್ಯೋಪಾಧ್ಯಾಯ ಕೃಷ್ಣ ಆಚಾರ್, ರಾಜೀವ ಶೆಟ್ಟಿ ಬ್ರಹ್ಮಾವರ, ಉದ್ಯಮಿ ಶರತ್ ಕೆ. ಶೆಟ್ಟಿ ಮಂಗಳೂರು, ನವೀನ್ ಪೂಜಾರಿ ಬ್ರಹ್ಮಾವರ, ಕುಮಾರಿ ಪ್ರಗತಿ ಮೊದಲಾದವರು ಉಪಸ್ಥಿತರಿದ್ದರು.
Advertisement. Scroll to continue reading.