ವರದಿ : ಶ್ರೀದತ್ತ ಹೆಬ್ರಿ
ಹೆಬ್ರಿ : ಭಾರತೀಯ ಜನತಾ ಪಾರ್ಟಿ ಕಾರ್ಕಳ, ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಕಳ ಇದರ ಹೆಬ್ರಿ ಶಕ್ತಿಕೇಂದ್ರ ನೂತನ ಹಿಂದುಳಿದ ವರ್ಗಗಳ ಮೋರ್ಚಾದ ಪದಾಧಿಕಾರಿಗಳ ಪದಗ್ರಹಣ ಬುಧವಾರ ಸಂಜೆ ಪಕ್ಷದ ಮುಖಂಡ ಹೆಬ್ರಿಯ ನರೇಂದ್ರ ನಾಯಕ್ ಅವರ ಮನೆಯ ವಠಾರದಲ್ಲಿ ನಡೆಯಿತು.
ಹೆಬ್ರಿ ಶಕ್ತಿ ಕೇಂದ್ರದ ಹಿಂದುಳಿದ ವರ್ಗದ ನೂತನ ಅಧ್ಯಕ್ಷರಾಗಿ ರತ್ನಾಕರ ವರಾಂಗ,
ಕಾರ್ಯದರ್ಶಿಯಾಗಿ ಸುಕುಮಾರ್ ಆಚಾರ್ಯ ಶಿವಪುರ ಇವರು ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ ರಮೇಶ್ ಕುಮಾರ್ ಶಿವಪುರ, ಎಚ್ ಗುರುದಾಸ್ ಶೆಣೈ ಹೆಬ್ರಿ , ಜ್ಯೋತಿ ಹರೀಶ್ , ಹಿಂದುಳಿದ ವರ್ಗದ ಕಾರ್ಕಳ ತಾಲ್ಲೂಕು ಅಧ್ಯಕ್ಷ ರಮಾನಂದ, ಪ್ರಧಾನ ಕಾರ್ಯದರ್ಶಿ ದಿವಾಕರ ಬಂಗೇರ, ಉಪಾಧ್ಯಕ್ಷ ಸದಾನಂದ ಸಾಲಿಯಾನ್, ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಬೈಲೂರು, ಹೆಬ್ರಿ ಗ್ರಾಪಂ ಅಧ್ಯಕ್ಷೆ ಮಾಲತಿ, ಉಪಾಧ್ಯಕ್ಷ ಗಣೇಶ್ ಕುಮಾರ್, ಮಾಜಿ ಅಧ್ಯಕ್ಷರುಗಳಾದ ಸುಧಾಕರ ಹೆಗ್ಡೆ, ಎಚ್ . ಕೆ ಸುಧಾಕರ್ , ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಭೋಜ ಪೂಜಾರಿ ಹಾಗೂ ಪ್ರಮುಖರು ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು. ರಾಮಚಂದ್ರ ನಾಯಕ್ ಮುನಿಯಾಲು ಕಾರ್ಯಕ್ರಮ ನಿರೂಪಿಸಿದರು .