Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ನಾಲ್ಕೂರಿನ ಕ್ರಷರ್ ನಲ್ಲಿ ಟಿಪ್ಪರ್ ಹರಿದು ಕ್ಲೀನರ್ ಕಾಲು ಜಖಂ

0

ಹೆಬ್ರಿ : ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಲ್ಕೂರು ಗ್ರಾಮದ ಮಿಯಾರು ಎಂಬಲ್ಲಿನ ಪ್ರವೀಣ್ ಹೆಗ್ಡೆ ಮಾಲೀಕತ್ವದ ಯೂನಿಟ್ ರಾಕ್ ಕ್ರಷರ್ ನಲ್ಲಿ ಮಂಗಳವಾರ ಬೆಳಿಗ್ಗೆ ಟಿಪ್ಪರಿಗೆ ಜಲ್ಲಿ ತುಂಬಿಸಲು ಚಾಲಕ ಲಾರಿಯನ್ನು ರಿವರ್ಸ್ ತೆಗೆಯುತ್ತಿದ್ದ ವೇಳೆ ಲಾರಿಯ ಹಿಂಬದಿ ಯಲ್ಲಿ ನಿಂತಿದ್ದ ಕ್ಲೀನರ್ ನ ಕಾಲಿನ ಮೇಲೆ ಲಾರಿಯ ಚಕ್ರ ಹರಿದ ಪರಿಣಾಮ ಆತನ ಕಾಲು ಗಂಭೀರವಾಗಿ ಜಖಂಗೊಂಡಿದೆ.

ಪ್ರವೀಣ್ ಹೆಗ್ಡೆ ಅವರ ಕ್ರಷರ್ ನಲ್ಲಿ ಕಾರ್ಮಿಕನಾಗಿದ್ದ ಅಸ್ಸಾಂ ಮೂಲದ ಪುದುಂ ಗೋರ ಎಂಬಾತ ಗಾಯಗೊಂಡವನು. ಟಿಪ್ಪರ್ ಚಾಲಕ ಪರಮೇಶ್ ಎಂಬಾತನ ನಿರ್ಲಕ್ಷ್ಯದ ಚಾಲನೆಯಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಕ್ರಷರ್ ಹಾಗೂ ಕ್ವಾರಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರ ಸುರಕ್ಷತೆಗೆ ಮಾಲೀಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಹೆಬ್ರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ : ಶ್ರೀದತ್ತ ಹೆಬ್ರಿ

Advertisement. Scroll to continue reading.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!