ವರದಿ : ದಿನೇಶ್ ರಾಯಪ್ಪನಮಠ
ಕೋಟ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಉಡುಪಿ ಜಿಲ್ಲೆ ಪಾಂಡೇಶ್ವರ ವಲಯದ ವತಿಯಿಂದ ಯೋಜನೆಯ ಸದಸ್ಯರಿಗೆ ತರಬೇತಿ ಕಾರ್ಯಕ್ರಮವನ್ನು ಧ.ಗ್ರಾ.ಯೋಜನೆ ತಾಲೂಕು ಯೋಜನಾಧಿಕಾರಿ ದಿನೇಶ್ ಉದ್ಘಾಟಿಸಿ ಮಾಹಿತಿ ನೀಡಿದರು.ಅಧ್ಯಕ್ಷತೆಯನ್ನು ಧ.ಗ್ರಾ.ಯೋ ವಲಯಾಧ್ಯಕ್ಷೆ ರಾಧ ಪೂಜಾರಿ ವಹಿಸಿದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಿಗೆ ಮೈಕ್ರೋಬಚತ್ ಎಲ್ ಐ ಸಿ ವಿಮಾ ಯೋಜನೆ ಪ್ರಮಾಣಪತ್ರ ವಿತರಿಸಿದರು. ಗೀನ್ ವೇ ಜಂಬೂ ಸ್ಟೈ ಸಂಘದ ಸದಸ್ಯರಿಗೆ ಸಾಂಕೇತಿಕವಾಗಿ ವಿತರಿಸಲಾಯಿತು. ಧ.ಗ್ರಾ.ಯೋ ತಾಲೂಕು ಲೆಕ್ಕಪರಿಶೋಧಕ ಮಂಜುನಾಥ ಉಪಸ್ಥಿತರಿದ್ದರು. ಸೇವಾ ಪ್ರತಿನಿಧಿ ಸರಿತಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಶ್ರೀದೇವಿ ಯಕ್ಷಿಮಠ ವಂದಿಸಿದರು.ಕಾರ್ಯಕ್ರಮವನ್ನು ಧ.ಗ್ರಾ.ಯೋ.ಒಕ್ಕೂಟದ ಮೇಲ್ವಿಚಾರಕ ನಾಗೇಂದ್ರ ನಿರೂಪಿಸಿದರು.
Advertisement. Scroll to continue reading.
In this article:Diksoochi news, diksoochi Tv, diksoochi udupi, Shri Dharmasthala Gramabhivriddi yojane
Click to comment