ವರದಿ : ಬಿ.ಎಸ್ ಆಚಾರ್ಯ
ಬ್ರಹ್ಮಾವರ: ಶಿಶು ಅಭಿವೃದ್ಧಿ ಯೋಜನೆಯ ಪೇತ್ರಿ ವಲಯದ ಕೀರ್ತಿ ನಗರ ಅಂಗನವಾಡಿ ಕೇಂದ್ರ ದಲ್ಲಿ ಮಾತೃ ವಂದನ ಸಪ್ತಾಹ ಹಾಗೂ ಪೋಷಣ ಅಭಿಯಾನ ಮಾಸಾಚರಣೆ ಜಾಥಾ ಮತ್ತು ಮಾಹಿತಿ ಕಾರ್ಯಕ್ರಮ ನಡೆಯಿತು. ಆರೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಮಮತಾ ಶೆಟ್ಟಿ ಮತ್ತು ಗ್ರಾಮ ಪಂಚಾಯತ್ ಸದಸ್ಯ ರತ್ನಾಕರ ಶೆಟ್ಟಿ, ಬಾಲವಿಕಾಸ ಸಮಿತಿ ಅಧ್ಯಕ್ಷ ರೆಸಿಲ್ಲಾ ನೇತೃತ್ವದಲ್ಲಿ ಜಾಥಾ ಕಾರ್ಯಕ್ರಮ ನಡೆಯಿತು. ನಂತರ ಸಭಾ ಕಾರ್ಯಕ್ರಮದಲ್ಲಿ ವಲಯದ ಮೇಲ್ವಿಚಾರಕಿ ವನಿತಾ ಎಸ್. ಹೆಗ್ಡೆ ಅವರು ಪೋಷಣ ಅಭಿಯಾನದ ಉದ್ದೇಶ ಮತ್ತು ಪೌಷ್ಠಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು.
ನಂತರ ಪೌಷ್ಠಿಕ ತೋಟದಲ್ಲಿ ತರಕಾರಿ ಗಿಡಗಳನ್ನು ನೆಡಲಾಯಿತು.
ಈ ಕಾರ್ಯಕ್ರಮವನ್ನು ಅಂಗನವಾಡಿ ಕಾರ್ಯಕರ್ತೆ ವಿಜಯಲಕ್ಷ್ಮಿ ಶೆಟ್ಟಿ ನಿರೂಪಿಸಿ, ಸ್ವಾಗತಿಸಿದರು. ಅಂಗನವಾಡಿ ಸಹಾಯಕಿ ವಸಂತಿ ವಂದಿಸಿದರು.
Advertisement. Scroll to continue reading.