Connect with us

Hi, what are you looking for?

Diksoochi News

ಕರಾವಳಿ

ಹಿರಿಯಡಕ : ನಿವೃತ್ತ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಮಲ್ಪೆ ರಾಘವೇಂದ್ರ ಅವರಿಗೆ ಗೌರವಾರ್ಪಣೆ

0

ಹಿರಿಯಡಕ : ಶಿಕ್ಷಕರ ದಿನಾಚರಣೆಯ ಅಂಗವಾಗಿ ಹಿರಿಯಡಕದ ಹಿರಿಯ ನಿವೃತ್ತ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದ ಮಲ್ಪೆ ರಾಘವೇಂದ್ರ ರವರನ್ನು ಅವರ ನಿವಾಸದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಶಿಕ್ಷಕರು ಸಮಾಜದ ಕಣ್ಣುಗಳಿದ್ದಂತೆ. ವಿದ್ಯಾರ್ಥಿಗಳು ಪ್ರಮಾಣಿಕತನ, ನಿಷ್ಟೆ ಪರೋಪಕಾರ ಗುಣಗಳನ್ನು ಬೆಳೆಸಬೇಕು. ಯಾರಿಂದಲೂ ಕಸಿಯಲಾಗದ ಸಂಪತ್ತು ವಿದ್ಯೆ. ಹೀಗಾಗಿ ಕಲಿಯುವ ಪ್ರವೃತ್ತಿ ನಿರಂತರವಾಗಿರಲಿ ಎಂದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ರತ್ನ ಮಲ್ಪೆ ರಾಘವೇಂದ್ರ, ಹಿರಿಯಡಕ ಬಿಲ್ಲವ ಸಂಘದ ಕಾರ್ಯದರ್ಶಿ ರವೀಂದ್ರ ಪೂಜಾರಿ, ಮಾಹೆ ಮಣಿಪಾಲ ಅಧಿಕಾರಿ ನಾಗರಾಜೇಂದ್ರ ಎಂ.ಎರ್, ನಳಿನಾ ಪ್ರಮೋದ್, ಯುವ ಲೇಖಕ ರಾಘವೇಂದ್ರಪ್ರಭು, ಕರ್ವಾಲು, ಸೌಮ್ಯ ಮೊದಲಾದವರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!