ಬೆಂಗಳೂರು : ಶಾಲೆಗಳ ಆವರಣದಲ್ಲಿ ಹೈಟೆನ್ಷನ್ ವೈರ್ ಅಪಾಯಕಾರಿಯಾಗಿದ್ದು, ಆವರಣದಲ್ಲಿರುವ ವೈರ್ ಗಳ ತಕ್ಷಣ ತೆರವಿಗೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ. ಈ ಸಂಬಂಧ ವಿದ್ಯುತ್ ಪ್ರಸರಣ ನಿಗಮ ಮತ್ತು ಎಸ್ಕಾಂಗಳಿಗೆ ನೋಟಿಸ್ ಜಾರಿ ಮಾಡಿದೆ.
2019ರಲ್ಲಿ ಕೊಪ್ಪಳದ ಐವರು ವಿದ್ಯಾರ್ಥಿಗಳು ಹಾಸ್ಟೆಲ್ನ ಧ್ವಜಸ್ತಂಭ ಇಳಿಸುವಾಗ ವಿದ್ಯುತ್ ಹರಿದು ವಿದ್ಯಾರ್ಥಿಗಳು ಸಾವನ್ನಪ್ಪಿದ್ದರು. ಹೀಗಾಗಿ ಸ್ವಯಂ ಪ್ರೇರಿತ ಪಿಐಎಲ್ ವಿಚಾರಣೆ ನಡೆಸಿದೆ. ಹಿಂದುಳಿದ ವರ್ಗಗಳ ಹಾಸ್ಟೆಲ್ ಸರ್ವೆಗೂ ಸೂಚನೆ ನೀಡಿ, ಹಾಸ್ಟೆಲ್ಗಳ ಸೌಕರ್ಯ ಪರಶೀಲನೆಗೂ ಸೂಚನೆ ನೀಡಿತ್ತು.
ಸದ್ಯ, ಈ ಸಂಬಂಧ ಮಹತ್ವದ ಆದೇಶ ಹೊರಡಿದ್ದು, ಶಾಲೆಗಳ ಆವರಣದಲ್ಲಿ ಹೈಟೆನ್ಷನ್ ವೈರ್ ಅಪಾಯಕಾರಿಯಾಗಿದ್ದು,
ಶಾಲೆ ಅವರಣದಲ್ಲಿ ಹೈಟೆನ್ಷನ್ ವೈರ್ ತೆರವುಗೊಳಿಸಬೇಕು ಎಂದಿದೆ. ಈ ಸಂಬಂಧ ಕೆಪಿಟಿಸಿಎಲ್, ಎಸ್ಕಾಂಗಳಿಗೂ ನೋಟಿಸ್ ನೀಡಿದೆ. ವಿದ್ಯುತ್ ಅವಘಡದಲ್ಲಿ ವಿದ್ಯಾರ್ಥಿಗಳ ಸಾವಿಗೆ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ಮಾಡದಂತೆ ಸೂಚನೆ ನೀಡಿದೆ.
Advertisement. Scroll to continue reading.