ಕೋಟ: ವಿಜಯಪುರದಿಂದ ಮಂಗಳೂರು ಕಳ್ಳಾಪು ಎ.ಪಿ.ಎಂ.ಸಿ ಗೆ ಹಣ್ಣು ಸಾಗಾಟ ಮಾಡುತಿದ್ದ ಬೊಲೆರೋ ಪಿಕಪ್ ವಾಹನವು ಕೋಟದ ಮಣೂರು ರಾಷ್ಟ್ರೀಯ ಹೆದ್ದಾರಿ 66ರ ರಾಜಲಕ್ಷ್ಮಿ ಸಭಾಭವನದ ಎದುರುಗಡೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಬದಿಯಲ್ಲಿರುವ ಕಬ್ಬಿಣದ ಬೇಲಿಗೆ ಡಿಕ್ಕಿ ಹೊಡೆದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಡಿಕ್ಕಿಯ ವೇಗಕ್ಕೆ ಬೊಲೆರೋ ವಾಹನದಲ್ಲಿ ಇದ್ದ ಕ್ಲೀನರ್ ರಸ್ತೆಗೆ ಬಿದ್ದು ಅವರ ಮೇಲೆ ವಾಹನ ಪಲ್ಟಿ ಹೊಡೆದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತನು ಮಹಾರಾಷ್ಟ್ರ ಸಾಂಗ್ಲಿ ದಿನೇಶ್ಚಂದ್ರಶೇಖರ ಮುಂಚಾಂಡಿ (20) ಎಂದು ಗುರುತಿಸಲಾಗಿದೆ. ಹಾಗೂ ಅಪಘಾತ ವೆಸಗಿ ಪರಾರಿಯಾಗಿದ್ದ ಬೊಲೆರೋ ಪಿಕಪ್ ಚಾಲಕ ಮಹಾರಾಷ್ಟ್ರ ಸಾಂಗ್ಲಿಯ ಶಿವಪುತ್ರ (25) ಎಂದು ತಿಳಿಯಲಾಗಿದೆ.
ಕೋಟ ಆರಕ್ಷಕ ಠಾಣಾಧಿಕಾರಿ ಸಂತೋಷ್ ಬಿ.ಪಿ. ಘಟನಾ ಸ್ಥಳಕ್ಕಾಗಮಿಸಿ ಪರಿಶೀಲಿಸಿದ್ದಾರೆ. ವಾಹನದ ಅಡಿ ಭಾಗದಲ್ಲಿ ಇದ್ದ ಮೃತರನ್ನು ಕ್ರೈನ್ ಮೂಲಕ ಎತ್ತಿ ಬ್ರಹ್ಮಾವರ ಶವಗಾರಕ್ಕೆ ಸಾಗಿಸಲಾಯಿತು. ಭಾನುವಾರ ಇದೇ ಪರಿಸರದ ಸಮೀಪ ಕೆಮಿಕಲ್ ಗ್ಯಾಸ್ ಹೊತ್ಯೊಯುತ್ತಿದ್ದ ಟ್ಯಾಂಕರ್ ಫಲ್ಟಿ ಹೊಡೆದಿದ್ದು ಕಣ್ಮುಂದಿರುವಾಗಲೇ ಮತ್ತೊಂದು ಅವಗಡ ಸಂಭವಿಸಿದೆ. ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ದಿನೇಶ್ ರಾಯಪ್ಪನಮಠ