ವರದಿ : ದಿನೇಶ್ ರಾಯಪ್ಪನಮಠ
ಕೋಟ: ಶಿರಿಯಾರ ಗ್ರಾಮಪಂಚಾಯತ್ ವ್ಯಾಪ್ತಿಯ ಕಾರ್ಮಿಕರಿಗೆ ಕಿಟ್ ವಿತರಣಾ ಕಾರ್ಯಕ್ರಮ ಸೋಮವಾರ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು
ಪಂಚಾಯತ್ ಅಧ್ಯಕ್ಷ ಬಿ.ಸುಧೀಂದ್ರ ಶೆಟ್ಟಿ ಕಿಟ್ ವಿತರಿಸಿ ಮಾತನಾಡಿ ಸರಕಾರದ ವತಿಯಿಂದ ನೀಡಲಾಗುತ್ತಿರುವ ಈ ಕಿಟ್ ಬಡ ಕಾರ್ಮಿಕರಿಗೆ ಅಲ್ಪ ಸಹಕಾರಿಯಾಗಲಿದೆ.ಕಿಟ್ ವಿತರಣೆಯಲ್ಲಿ ಯಾವಯದೇ ರೀತಿಯ ಲೋಪದೊಶಗಳು ನಢಯದೆ ಇಲಾಖೆ ಶಿಸ್ತುಬದ್ಧ ರೀತಿಯಲ್ಲಿ ಹಂಚಿಕೆ ಮಾಡುತ್ತಿರುವುದು ಶ್ಲಾಘನೀಯ ಕಾರ್ಮಿಕ ಇಲಾಖೆಯ ಹಲವು ರೀತಿಯ ಸೌಲಭ್ಯಗಳನ್ನು ಕಾರ್ಮಿಕರು ಕಾಲಕ್ಕನುಗುಣವಾಗಿ ಪಡೆಯಬೇಕು ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಜಿಲ್ಲಾ ಕಾರ್ಮಿಕ ನಿರೀಕ್ಷ ಪ್ರವೀಣ್ ಕುಮಾರ್,ಗ್ರಾಮಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.ಪಂಚಾಯತ್ ಕಾರ್ಯದರ್ಶಿ ಆನಂದ್ ನಾಯ್ಕ್ ಸ್ವಾಗತಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ ನಿರೂಪಿಸಿ ವಂದಿಸಿದರು.
ಶಿರಿಯಾರ ಗ್ರಾಮಪಂಚಾಯತ್ ವ್ಯಾಪ್ತಿಯ ಕಾರ್ಮಿಕರ ಕಿಟ್ ವಿತರಣಾ ಕಾರ್ಯಕ್ರಮದಲ್ಲಿಪಂಚಾಯತ್ ಅಧ್ಯಕ್ಷ ಬಿ.ಸುಧೀಂದ್ರ ಶೆಟ್ಟಿ ಕಿಟ್ ವಿತರಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸತೀಶ್ ವಡ್ಡರ್ಸೆ, ಜಿಲ್ಲಾ ಕಾರ್ಮಿಕ ನಿರೀಕ್ಷ ಪ್ರವೀಣ್ ಕುಮಾರ್ ಮತಿತರರು ಉಪಸ್ಥಿತರಿದ್ದರು.