Connect with us

Hi, what are you looking for?

Diksoochi News

ಕರಾವಳಿ

ಕೋಟ ಸಾರ್ವಜನಿಕ ಗಣೇಶೋತ್ಸವ ಸಂಪನ್ನ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಕೋಟದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಕೋಟ ಅಮೃತೇಶ್ವರಿ ದೇವಳದ ಸಭಾಂಗಣದಲ್ಲಿ ಪೂಜಿಪ ಗಣಪನ್ನು ಶನಿವಾರ ಸರಳ ರೀತಿಯ ಮೆರವಣಿಗೆ ಮೂಲಕ ಕೋಟ ಪಡುಕರೆ ಕಡಲದಲ್ಲಿ ಲೀನಗೊಳಿಸಲಾಯಿತು.ಈ ಆರಕ್ಷಕರ ಬಿಗಿ ಕಣ್ಗಾವಲಿನ ನಡುವೆ ಸಮಿತಿಯ ಪದಾಧಿಕಾರಿಗಳು ಸರಕಾರದ ಮಾರ್ಗಸೂಚಿ ಉಲ್ಲಂಘನೆಯಾಗದಂತೆ ಶಿಸ್ತುಬದ್ಧ ರೀತಿಯಲ್ಲಿ ಅಮೃತೇಶ್ವರ ದೇವಳದಿಂದ ವೈಭವಪೂರಿತ ಚಂಡೆ ನಾದ,ವಾದ್ಯಮೇಳಗಳ ಮೂಲಕ ಸಮುದ್ರಕ್ಕೆ ಕೊಂಡ್ಯೊಯಲಾಯಿತು.ಅ ಪಯುಕ್ತ ವೇ.ಮೂ.ಸುಬ್ರಹ್ಮಣ್ಯ ಅಡಿಗರ ನೇತ್ರತ್ವದಲ್ಲಿ ಗಣಹೋಮ, ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಸಂಪನ್ನಗೊಂಡಿತು.

ಸಮಿತಿಯ ಅಧ್ಯಕ್ಷ ರಮಾನಾಥ ಜೋಗಿ,ಉಪಾಧ್ಯಕ್ಷ ವಿಠ್ಠಲ ಪೂಜಾರಿ,ಸೋಮ ಮರಕಾಲ,ಚಂದ್ರ ಪೂಜಾರಿ ,ಆನಂದ ದೇವಾಡಿಗ,ಕಾರ್ಯದರ್ಶಿ ಚಂದ್ರಶೇಖರ ಆಚಾರ್ಯ, ಕೋಶಾಧಿಕಾರಿ ಶೀಲರಾಜ್ ಕಾಂಚನ್,ಸಂಘಟನೆ ಪ್ರಮುಖರಾದ ದೇವದಾಸ ಕಾಂಚನ್,ಸತೀಶ್ ಪೂಜಾರಿ, ಜೀವನ್ ಪೂಜಾರಿ,ಗಣೇಶ್ ಪೂಜಾರಿ,ಗಣೇಶ್ ಕುಂದರ್,ಜಗನಾಥ ಕಾಂಚನ್,ಉದಯ್ ದೇವಾಡಿಗ,ಕಿರಣ್ ಪೂಜಾರಿ,ರಂಜೀತ್ ಕುಮಾರ್,ಸಂಜೀವ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಕೋಟದ ಫಿಶರೀಶ ರಸ್ತೆಯ ಮೂಲಕ ಗಣೇಶ ವಿಗ್ರಹವನ್ನು ಮೆರವಣಿಗೆ ಮೂಲಕ ಪಡುಕರೆಯ ಕಡಲಲ್ಲಿ ಲೀನಗೊಳಿಸಲಾಯಿತು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!