Connect with us

Hi, what are you looking for?

Diksoochi News

ಕರಾವಳಿ

ಕೋಟ : ಮಾತು ಬರದ ಅನಾಥ ಯುವಕನ ರಕ್ಷಣೆ

0

ವರದಿ: ದಿನೇಶ್ ರಾಯಪ್ಪನಮಠ
ಕೋಟ: ಕೋಟ ವಿವೇಕ ಹೈಸ್ಕೂಲ್ ಬಳಿ ಇರುವ ಬಸ್ಸ್ ನಿಲ್ದಾಣದಲ್ಲಿ ಕೆಲವು ದಿನಗಳಿಂದ ಅಲ್ಲೇ ಸುತ್ತಾಡುತ್ತಿದ್ದ, ಮಾತು ಬಾರದ ಯುವಕನನ್ನು ರೋಟರಿ ಕ್ಲಬ್ ಕೋಟ ಸಿಟಿಯ ಸದಸ್ಯರ ಮಾನವೀಯ ಕಾರ್ಯದಿಂದ ಹೊಸಬದುಕು ನೀಡಲಾಯಿತು.
ಕ್ಲಬ್‍ನ ಸದಸ್ಯ ಶಿವಾನಂದ ನಾಯರಿ ಅವರ ಮಾಹಿತಿ ಮೇರೆಗೆ ತಡರಾತ್ರಿ ಹೊಸಬೆಳಕು ಸಂಸ್ಥೆಯ ಸಂಸ್ಥಾಪಕರಾದ ತನುಲಾ ತರುಣ್, ವಿನಯಚಂದ್ರ ಅವರು ಕೂಡಲೇ ಸ್ಥಳಾಕಾಗಮಿಸಿ ಯುವಕನನ್ನು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಮಾತು ಬಾರದ ಕಾರಣ ಯಾವುದೇ ಮಾಹಿತಿ ತಿಳಿದುಬಂದಿಲ್ಲ. ರಕ್ಷಣಾ ಕಾರ್ಯದಲ್ಲಿ ರೋಟರಿ ಕ್ಲಬ್ ಕೋಟ ಸಿಟಿಯ ನಿತ್ಯಾನಂದ ನಾಯರಿ, ವಿಷ್ಣುಮೂರ್ತಿ ಉರಾಳ, ಕಾರ್ಯದರ್ಶಿ ಶಿವಾನಂದ ನಾಯರಿ, ಮಂಜುನಾಥ ಬೈಲೂರು ಯುವಕನ ರಕ್ಷಣಾ ಕಾರ್ಯದಲ್ಲಿ ಸಹಕರಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!