ಮೈಸೂರು : ಮೈಸೂರಿನಲ್ಲಿ ದೇಗುಲಗಳ ತೆರವು ಕಾರ್ಯಕ್ಕೆ ಮೈಸೂರು ಜಿಲ್ಲಾಡಳಿತವು ತಾತ್ಕಾಲಿಕ ಬ್ರೇಕ್ ಹಾಕಿದೆ. ರಾಜ್ಯ ಸರ್ಕಾರದ ಮುಂದಿನ ಆದೇಶ ಬರುವ ವರೆಗೆ ಯಾಥಾಸ್ಥಿತಿ ಮುಂದುವರೆಸಲು ಆದೇಶ ನೀಡಿದೆ.
ನಂಜನಗೂಡು ದೇಗುಲ ತೆರುವು ಕಾರ್ಯ ವಿಚಾರಕ್ಕೆ ರಾಜ್ಯ ಸರ್ಕಾರದ ನೋಟಿಸ್ ಬಂದಿದ್ದು, ಹೀಗಾಗಿ ಸದ್ಯಕ್ಕೆ ಮೈಸೂರಿನಲ್ಲಿ ದೇಗುಲಗಳ ತೆರವು ಕಾರ್ಯಕ್ಕೆ ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ. ಸರ್ಕಾರದ ನಿರ್ದೇಶನ ಬರುವವರೆಗೆ ಯಾವುದೇ ದೇಗುಲಗಳ ತೆರವು ಕಾರ್ಯಾಚರಣೆ ಇರುವುದಿಲ್ಲ ಎಂದು ಮೈಸೂರು ಡಿಸಿ ಗೌತಮ್ ತಿಳಿಸಿದ್ದಾರೆ.
Advertisement. Scroll to continue reading.