Connect with us

Hi, what are you looking for?

Diksoochi News

ಕರಾವಳಿ

ಹೆಬ್ರಿ : ರಾಷ್ಟ್ರೀಯ ಹೆದ್ದಾರಿಯ ಹೊಂಡಗಳ ಮುಚ್ಚಿದ ಯುವಕರು

0

ವರದಿ : ಶ್ರೀದತ್ತ ಹೆಬ್ರಿ

ಹೆಬ್ರಿ : ಉಡುಪಿ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಹೆಬ್ರಿ ಮೇಲ್ ಪೇಟೆಯ ರಸ್ತೆಯಲ್ಲಿ ಬೃಹತ್ ಹೊಂಡಗಳು ಬಿದ್ದಿದ್ದು ಇದರಿಂದ ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸವಾರರು ಕಷ್ಟಪಡುತ್ತಿದ್ದರು. ಹೊಂಡಗಳಿಂದ ಆಯತಪ್ಪಿ ದ್ವಿಚಕ್ರ ವಾಹನ ಸವಾರರು ಬಹಳಷ್ಟು ಸಲ ಬಿದ್ದ ಘಟನೆ ನಡೆದಿದೆ. ಈ ಮಾರ್ಗದಲ್ಲಿ ದಿನನಿತ್ಯ ಸಾಕಷ್ಟು ಅಂಬ್ಯುಲೆನ್ಸ್ ಗಳು ಸಂಚರಿಸುತ್ತವೆ. ಅವರ ಪಾಡು ಹೇಳತೀರದು. ಹೊಂಡ ಮುಚ್ಚುವ ಕೆಲಸವನ್ನು ರಾಷ್ಟ್ರೀಯ ಹೆದ್ದಾರಿ ಇಲಾಖೆ ಮತ್ತು ಸ್ಥಳೀಯ ಗ್ರಾಮಪಂಚಾಯತ್ ಮಾಡಬೇಕಿತ್ತು ಆದರೆ ಅವರು ಇತ್ತ ಗಮನ ಕೊಡಲಿಲ್ಲ. ಇದರಿಂದ ಮುಂದೆ ಆಗುವ ಅನಾಹುತ ತಪ್ಪಿಸಲು. ಹೆದ್ದಾರಿಯ ಪಕ್ಕದಲ್ಲಿರುವ ಅಂಗಡಿ ವ್ಯಾಪಾರಸ್ಥರು ಬುಧವಾರ ಸ್ವಯಂ ಪ್ರೇರಿತರಾಗಿ ಹೊಂಡಗಳಿಗೆ ಕಾಂಕ್ರಿಟ್ ಹಾಕಿ ಮುಚ್ಚಿ ಸಮಾಜ ಸೇವೆ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗಳು ಕೇಳಿ ಬಂದಿವೆ.

ಹೊಂಡ ಮುಚ್ಚಲು ಸಿಮೆಂಟಿನ ವ್ಯವಸ್ಥೆಯನ್ನು ಸುದೀಪ್ ಕಬ್ಬಿನಾಲೆಯವರು ಮಾಡಿದ್ದರು. ಸ್ಥಳೀಯ ಯುವಕರಾದ ಹರೀಶ್ ಆಚಾರ್ಯ, ಮಂಜುನಾಥ, ರಾಘವೇಂದ್ರ, ಟೈಲರ್ ರಾಜು ಭಂಡಾರಿ, ಭರತ್, ಸುಂದರ್ , ಸುದೀಪ್ ಮತ್ತಿತರರು ಹೊಂಡ ಮುಚ್ಚುವಲ್ಲಿ ಸಹಕರಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!