ಬೈಂದೂರು: ಬೈಂದೂರು ತಾಲೂಕಿನ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಸೇವೆಗೆ ಸದಾ ಸಿದ್ಧ ಕಂಕಣ ಬದ್ದ ಎಂಬ ಘನ ಉದ್ದೇಶವನ್ನು ಇಟ್ಟುಕೊಂಡು ಹುಟ್ಟಿದ ಮಾನಸ ಮಿತ್ರ ಮಂಡಳಿಯ ಆಲಂದೂರು ಇದರ 18ನೇ ವರ್ಷದ ಶಾರದೋತ್ಸವದ ಅಂಗವಾಗಿ ದಸರಾ ಕ್ರೀಡಾಕೂಟ ಕೊವಿಡ್ ನಿಯಮಾವಳಿಯನ್ನು ಪಾಲಿಸಿಕೊಂಡು ದಿನಾಂಕ ಸೆಪ್ಟಂಬರ್ 26, ಭಾನುವಾರ ಬೆಳಗ್ಗೆ 9ಗಂಟೆಗೆ ಸಂಪ್ರದಾಯದಂತೆ ಉದ್ಘಾಟನೆಗೊಳ್ಳಲಿದೆ. ಜೂನಿಯರ್, ಸಬ್ ಜೂನಿಯರ್, ಸೀನಿಯರ್ ಮಹಿಳಾ ವಿಭಾಗದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳು ಜರಗಲಿರುವುದು ಎಂದು ಮಿತ್ರ ಮಂಡಳಿಯ ಅಧ್ಯಕ್ಷ ಶ್ರೀಕಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ