ವರದಿ : ಬಿ.ಎಸ್.ಆಚಾರ್ಯ
ಬ್ರಹ್ಮಾವರ : ಸಂಚಲನ ಉಡುಪಿ ಹಾಗೂ ಅಮ್ಮ ಎಂಟಪ್ರ್ರೈಸಸ್ ಬ್ರಹ್ಮಾವರ ನೇತೃತ್ವದಲ್ಲಿ ಬ್ರಹ್ಮಾವರ ವಾರಂಬಳ್ಳಿ ಗ್ರಾಮ ಪಂಚಾಯತ್ ಸಹಭಾಗಿತ್ವದಲ್ಲಿ ಭಾನುವಾರ ಬ್ರಹ್ಮಾವರ ನಾರಾಯಣ ಗುರು ಸಭಾಭವನದಲ್ಲಿ ಅಸಂಘಟಿತ ಕಾರ್ಮಿಕರ ಇ-ಶ್ರಮ್ ಕಾರ್ಡ್ ಹಾಗೂ ಪ್ರಧಾನಮಂತ್ರಿ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಉಚಿತ ನೋಂದಣಿ ಅಭಿಯಾನ ಜರುಗಿತು.
ಉಡುಪಿ ಶಾಸಕ ಕೆ ರಘುಪತಿ ಭಟ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರ ಅದೆಷ್ಟೋ ಜನಪರ ಯೋಜನೆಯನ್ನು ಜಾರಿ ಮಾಡಿದರೂ ಅದನ್ನು ಅಧಿಕಾರಿಗಳು ಜನಪ್ರತಿನಿಧಿಗಳು ಮಾಡಲು ಅಸಾದ್ಯವಾಗುವಂತ ಕೆಲಸವನ್ನು ಕೇಂದ್ರ ಸರಕಾರ ಸೇವಾ ಸಿಂಧುವಿನಂತ ಕೇಂದ್ರದಲ್ಲಿ ಮಾಡಲು ಅನೂಕೂಲ ಮಾಡಿ ಜನರೀಗೆ ನೆರವಾಗುತ್ತಿದೆ ಎಂದರು.
ಇದೇ ಸಂದರ್ಬದಲ್ಲಿ ಅಸಂಘಟಿತ ಕಾರ್ಮೀಕರ ಇ -ಶ್ರಮ್ ಕಾರ್ಡ್ ವಿತರಿಸಲಾಯಿತು. ಅಶಕ್ತರಿಗೆ ಆರ್ಥಿಕ ನೆರವನ್ನು ನೀಡಲಾಯಿತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆರ್ಥಿಕ ನೆರವನ್ನು ನೀಡಲಾಯಿತು ಸಾಧಕರನ್ನು ಸನಾನಿಸಲಾಯಿತು .
ಜಿಲ್ಲಾ ಕಾರ್ಮಿಕ ಇಲಾಖೆಯ ಆಯುಕ್ತ ಕುಮಾರ್ ಬಿ. ಆರ್, ಸೇವಾ ಸಿಂಧು ಜಿಲ್ಲಾ ಯೋಜನಾ ವ್ಯವಸ್ಥಾಪಕ ಅರುಣ್ ಎಸ್. ಕೆ, ಬ್ರಹ್ಮಾವರ , ಉದ್ಯಮಿ ಬಿರ್ತಿ ರಾಜೇಶ್ ಶೆಟ್ಟಿ, ಎಸ್. ನಾರಾಯಣ್, ಸಂಚಲನದ ಗೌರವಾಧ್ಯಕ್ಷ ಕೆ. ಶಿವರಾಮ, ಉಡುಪಿ ಮಲಬಾರ್ ಗೋಲ್ಡ್ ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್, ಕರ್ನಾಟಕ ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಬ್ರಹ್ಮಾವರದ ಚೇತನ್ ಶೆಟ್ಟಿ, ಸಮಾಜ ಸೇವಕರಾದ ಅರಲ್ ಡಿಸೋಜ, ಸುಮತ ನಾಯಕ್ ಅಮ್ಮುಂಜೆ ಇನ್ನಿತರು ಉಪಸ್ಥಿತರಿದ್ದರು.