Connect with us

Hi, what are you looking for?

Diksoochi News

Uncategorized

ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನಗಳ್ಳತನ ತಡೆಯಲು ಗ್ಯಾರೇಜ್‌ ಮಾಲಕರೊಂದಿಗೆ ಸಭೆ

0

ವರದಿ : ದಿನೇಶ್ ರಾಯಪ್ಪನಮಠ

ಕೊಲ್ಲೂರು:  ವಿವಿಧೆಡೆ ದನಕಳ್ಳತನ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಲ್ಲೂರು ಪೊಲೀಸ್ ಠಾಣಾ ವ್ಯಾಪ್ತಿಯ ಗ್ಯಾರೇಜ್‌ ಮ್ಹಾಲಕರ ಸಭೆ ಎ ಎಸ್ ಐ ಶೇಖರ್ ಮಲ್ಪೆ ಅವರ ನೇತೃತ್ವದಲ್ಲಿ ಶನಿವಾರ ಜರುಗಿತು.

 ಈ ಸಂದರ್ಭ ಕೊಲ್ಲೂರು ಠಾಣಾ ವ್ಯಾಪ್ತಿಯ ಗ್ಯಾರೇಜ್‌ ಮ್ಹಾಲಕರು ಸಭೆಯಲ್ಲಿ ಭಾಗವಹಿಸಿದ್ದು, ದನ ಕಳ್ಳತನ ಪ್ರಕರಣದಲ್ಲಿ ಭಾಗಿಯಾದಂತಹ ವಾಹನಗಳು ರಿಪೇರಿಗಾಗಲಿ, ಸರ್ವಿಸ್‌ ಪ್ರಯುಕ್ತ ಗ್ಯಾರೇಜಿಗೆ ಬಂದಲ್ಲಿ ಕೂಡಲೇ ಠಾಣೆಗೆ ಮಾಹಿತಿ ನೀಡುವಂತೆ ಹಾಗೂ ಗ್ಯಾರೇಜ್‌ ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸುವಂತೆ ಮತ್ತು ರಾತ್ರಿ ವೇಳೆಯಲ್ಲಿ ಒರ್ವ ವ್ಯಕ್ತಿಯಾದರೂ ಉಳಿದುಕೊಳ್ಳುವಂತೆ ಸೂಚಿಸಲಾಯಿತು. ಈ ಮೂಲಕ ಯಾವುದೇ ರೀತಿಯ ದನ ಕಳ್ಳತನ ಪ್ರಕರಣಗಳಿಗೆ ಆಸ್ಪದ ನೀಡದಂತೆ ಎಚ್ಚರಿಕೆ ವಹಿಸುವಂತೆ ಎ ಎಸ್ ಐ ಶೇಖರ್ ಮಲ್ಪೆ ಸೂಚನೆ ನೀಡಿದರು.

Advertisement. Scroll to continue reading.

ಠಾಣಾಧಿಕಾರಿಗಳ ಸೂಚನೆಗೆ ಪ್ರತಿಕ್ರಿಯಿಸಿ ಗ್ಯಾರೇಜ್‌ ಮಾಲಕರು ದನ ಕಳ್ಳತನ ಪ್ರಕರಣಗಳನ್ನು ತಡೆಯಲು ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.

Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!