Connect with us

Hi, what are you looking for?

Diksoochi News

ಕರಾವಳಿ

ಬ್ರಹ್ಮಾವರ : ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ದಿ.ಆಸ್ಕರ್ ಫೆರ್ನಾಂಡೀಸ್ ಅವರಿಗೆ ನುಡಿ ನಮನ

0

ವರದಿ : ಬಿ.ಎಸ್.ಆಚಾರ್ಯ

ಬ್ರಹ್ಮಾವರ : ಕೇಂದ್ರ ಸಚಿವ, ಸಂಸದ, ಹಿರಿಯ ರಾಜಕಾರಣಿ ಆಸ್ಕರ್ ಫೆರ್ನಾಂಡೀಸ್ ರವರ ನಿಧನಕ್ಕೆ ಭಾನುವಾರ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಬ್ಲಾಕ್ ಕಛೇರಿಯಲ್ಲಿ ನುಡಿ ನಮನ ಸಲ್ಲಿಸಲಾಯಿತು.
ಈ ಸಂದರ್ಭ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿ ಆಸ್ಕರ್ ರವರಿಗೆ ಬ್ರಹ್ಮಾವರ ವಿಧಾನ ಸಭಾ ಕ್ಷೇತ್ರ ಅವರ ಅಚ್ಚು ಮೆಚ್ಚಿನ ಸ್ಥಳವಾಗಿದೆ. ಅವರನ್ನು ಇಲ್ಲಿ ನೆನಪಿಸುವ ಕಾರ್ಯ ಶ್ಲಾಘನೀಯವಾಗಿದೆ. ಕಳಂಕ ರಹಿತವಾಗಿ ಸುದೀರ್ಘ 43 ವರ್ಷ ಕಾಲ ರಾಜಕೀಯದಲ್ಲಿದ್ದ ಏಕೈಕ ವ್ಯಕ್ತಿ ಆಸ್ಕರ್ ಫೆರ್ನಾಡಿಂಸ್. ಅವರನ್ನು ತಾನು ಬಾಲ್ಯದಿಂದಲೂ ನಮ್ಮ ತಾಯಿ ಮತ್ತು ತಂದೆಯೊಂದಿಗೆ ನಿಕಟ ಸಂಪರ್ಕದಲ್ಲಿರುವುದನ್ನು ಕಂಡಿದ್ದೇನೆ. ಉಡುಪಿ ನಗರ ಸಭೆ ಸದಸ್ಯರಾಗಿ ಕೇಂದ್ರ ಸರಕಾರದಲ್ಲಿ ಮಂತ್ರಿ ಸ್ಥಾನ ಪಡೆಯಲು ಅವರ ಶ್ರಮ ಮತ್ತು ಪ್ರಾಮಾಣಿಕತೆ ಕಾರಣವಾಗಿದೆ ಎಂದರು.
ಆಸ್ಕರ್ ಅವರ ಒಡನಾಡಿ ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಬುಜಂಗ ಶೆಟ್ಟಿ, ಮಾಜಿ ಬ್ರಹ್ಮಾವರ ಬ್ಲಾಕ್ ಅಧ್ಯಕ್ಷ ನಿತ್ಯಾನಂದ ಶೆಟ್ಟಿ, ಕೃಷ್ಣಪ್ಪ ಪೂಜಾರಿ, ವೆರೋನಿಕಾ ಕರ್ನೇಲಿಯೋ, ದಿನಕರ ಹೇರೂರು ನುಡಿ ನಮನ ಸಲ್ಲಿಸಿದರು.


ಉಡುಪಿ ಕಾಂಗ್ರೇಸ್ ಪ್ರಮುಖರಾದ ರಮೇಶ್ ಕಾಂಚನ್, ಸತೀಶ್ ಅಮೀನ ಪಡುಕೆರೆ, ಯತೀಶ್ ಕರ್ಕೆರಾ, ಉದ್ಯಾವರ ನಾಗೇಶ್ ಉಪಸ್ಥಿತರಿದ್ದರು. ಆಸ್ಕರ್ ರವರ ಭಾವ ಚಿತ್ರಕ್ಕೆ ಎಲ್ಲಾ ಸದಸ್ಯರು ಪುಷ್ಪ ನಮನ ಸಲ್ಲಿಸಿದರು.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!