Connect with us

Hi, what are you looking for?

Diksoochi News

ಕರಾವಳಿ

ಕಾಂಗ್ರೆಸ್ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಭಾರತಕ್ಕೆ ದುರ್ದೈವ ಕಾಡಲಿದೆ : ಐರೋಡಿ ವಿಠ್ಠಲ ಪೂಜಾರಿ

0

ವರದಿ : ದಿನೇಶ್ ರಾಯಪ್ಪನಮಠ

ಕೋಟ: ಕಾಂಗ್ರೆಸ್ ಆಡಳಿತ ಇರುವ ರಾಜ್ಯಗಳಲ್ಲಿ ಈಗಾಗಲೇ ನಾಯಕತ್ವ ಬದಲಾವಣೆಗೆ ಭಿನ್ನಮತ ಸ್ಪೋಟಗೊಂಡು ಅಂಡು ಸುಟ್ಟ ಬೆಕ್ಕಿನಂತಾಗಿರುವ ಕೇಂದ್ರದ ಕಾಂಗ್ರೆಸ್ ಹೈಕಮಾಂಡ್ ಅದೇ ಕೆಲವೇ ಮುಖಗಳ ಪೈಕಿ, ತಾಯಿ ಮಗನ ಮುಂದಾಳತ್ವ ಪ್ರಾದೇಶಿಕ ಪಕ್ಷಗಳ ಹೊಡೆತಕ್ಕೆ ತನ್ನ ಅಸ್ತಿತ್ವ ಉಳಿಸಿಕೊಳ್ಳಲಾಗದೆ, ಅವುಗಳ ಅಡಿಯಾಳಾಗಿರುವ ಕಾಂಗ್ರೆಸ್ ಇನ್ನೊಮ್ಮೆ ಅಧಿಕಾರಕ್ಕೆ ಬಂದರೆ ಭಾರತಕ್ಕೆ ದುರ್ದೈವ ಕಾಡಿದೆ ಅಂತಾನೆ ಅರ್ಥ. ಅಂತಹ ಕೆಟ್ಟ ಘಳಿಗೆ ಭಾರತಕ್ಕೇನಾದರೂ ಬಂದು ಮೋದಿಯವರನ್ನ ಬಂಧಿಸಿದರೆ ಭಾರತೀಯ ಜನತಾಪಾರ್ಟಿಯ ಕಟ್ಟಕಡೆಯ ಕಾರ್ಯಕರ್ತರನೂ ಕೂಡ ಸುಮ್ಮನೆ ಕೂರಲಾರ. ತನ್ನ ಪ್ರಾಣ ಪಣಕ್ಕಿಟ್ಟಾದರೂ ಹೋರಾಟ ಮಾಡುವ ಛಾತಿ ಎದೆಗಾರಿಕೆ ತೋರ್ಪಡಿಸಬಲ್ಲ. ಇಂತಹ ತೆವಲುಗಳಿಗೆ ಜನತೆ ಉತ್ತರ ನೀಡುತ್ತಾರೆ. ಈ ಕಚ್ಚೆ ಹರುಕಗಳಿಗೆ ಮುಂದಿನ ದಿನಗಳಲ್ಲಿ ದಿಟ್ಟ ಉತ್ತರ ನೀಡಲು ಸ್ನೇಹಕ್ಕೂ ಬದ್ದ ಸಮರಕ್ಕೂ ಸಿದ್ದ ಎಂಬ ಸಿದ್ದಾಂತಡಿಯ ಕಾರ್ಯಪಡೆ ಸದಾ ತಯಾರಿರುತ್ತೆ. ಎನ್ನುವ ಅರಿವು ಇರಲಿ ಈ ಕಾಂಗ್ರೆಸ್ ನವರಿಗೆ ಎಂದು ರಾಜ್ಯ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಐರೋಡಿ ವಿಠ್ಠಲ ಪೂಜಾರಿ ಛೇಡಿಸಿದ್ದಾರೆ. ಅವರು ಭಾನುವಾರ ಮಾಧ್ಯಮ ಹೇಳಿಕೆ ಬಿಡುಗಡೆಗೊಳಿಸಿ ಕಾಶ್ಮೀರದ ಕಾಂಗ್ರೆಸ್ ಮುಖಂಡ ಅಬ್ದುಲ್ ರಶೀದ್ ಹೇಳಿಕೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement. Scroll to continue reading.
Click to comment

Leave a Reply

Your email address will not be published. Required fields are marked *

Advertisement

Trending

You May Also Like

error: Content is protected !!